ಕೆಂಪು ಬಣ್ಣ ಕ್ರಾಂತಿಯ ಸಂಕೇತ: ಮೋದಿಗೆ ಅಖಿಲೇಶ್ ತಿರುಗೇಟು

Prasthutha|

ಅಖಿಲೇಶ್ ರ ಕೆಂಪು ಟೋಪಿಯನ್ನು ವ್ಯಂಗ್ಯವಾಡಿದ್ದ ಮೋದಿ

- Advertisement -


ಲಕ್ನೋ: ಕೆಂಪು ಟೋಪಿಯ ಬಗ್ಗೆ ವ್ಯಂಗ್ಯವಾಡಿದ್ದ ಪ್ರಧಾನಿ ನರೇಂದ್ರ ಮೋದಿಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ತಿರುಗೇಟು ನೀಡಿದ್ದಾರೆ.

ಕೆಂಪು ಬಣ್ಣ ಬದಲಾವಣೆ ಮತ್ತು ಕ್ರಾಂತಿಯ ಸಂಕೆತವಾಗಿದೆ. ಬಿಜೆಪಿಗೆ ಅದು ಅರ್ಥವಾಗುತ್ತಿಲ್ಲ ಎಂದು ಅಖಿಲೇಶ್ ಹೇಳಿದರು.

- Advertisement -

‘ಕೆಂಪು ಬಣ್ಣ ಭಾವನೆಗಳನ್ನು ಸೂಚಿಸುತ್ತದೆ. ಬಿಜೆಪಿಯವರಿಗೆ ಭಾವನೆಗಳು ಅರ್ಥವಾಗುತ್ತಿಲ್ಲ. ಇದು ಬದಲಾವಣೆ ಮತ್ತು ಕ್ರಾಂತಿಯ ಬಣ್ಣವೂ ಹೌದು. ಉತ್ತರ ಪ್ರದೇಶದಲ್ಲಿ ಈ ಬಾರಿ ಬದಲಾವಣೆ ಆಗಲಿದೆ ಎಂಬುದು ಅವರಿಗೆ ಗೊತ್ತಿದೆ. ಈ ಹಿಂದೆ ಮುಖ್ಯಮಂತ್ರಿಯೂ ಇದೇ ಭಾಷೆ ಬಳಸಿದ್ದರು. ಇದೇನೂ ಹೊಸದಲ್ಲ” ಎಂದು ಅಖಿಲೇಶ್ ಹೇಳಿದ್ದಾರೆ.


ಕೆಂಪು ಟೋಪಿ ಉತ್ತರ ಪ್ರದೇಶಕ್ಕೆ ರೆಡ್ ಅಲರ್ಟ್ ಆಗಿದೆ. ಅಖಿಲೇಶ್ ಅವರ ರೆಡ್ ಕ್ಯಾಪ್ ಅಪಾಯದ ಸಂಕೇತ ಎಂದು ಮೋದಿ ಲೇವಡಿ ಮಾಡಿದ್ದರು

Join Whatsapp