ಪನ್ನೀರ್ ಸೆಲ್ವಂಗೆ ಲೀಗಲ್ ನೋಟಿಸ್ ನೀಡಿದ ಎಐಎಡಿಎಂಕೆ

Prasthutha|

ಚೆನ್ನೈ: ಪಕ್ಷದ ಹೆಸರು ಮತ್ತು ಸೀಲ್ ಅನ್ನು ಬಳಸದಂತೆ ಉಚ್ಚಾಟಿತ ಸಂಯೋಜಕ ಒ. ಪನ್ನೀರ್ ಸೆಲ್ವಂ ಗೆ ಎಐಎಡಿಎಂಕೆ ಲೀಗಲ್ ನೋಟಿಸ್ ನೀಡಿದೆ.

- Advertisement -

ಎಐಎಡಿಎಂಕೆ ಮಧ್ಯಂತರ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಪಕ್ಷದ ಹೆಸರು ಮತ್ತು ಸೀಲ್ ಅನ್ನು ಬಳಸದಂತೆ ಒ. ಪನ್ನೀರ್ ಸೆಲ್ವಂ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.

ಪಳನಿಸ್ವಾಮಿ ಅವರ ಪರವಾಗಿ ಹೊರಡಿಸಲಾದ ನೋಟಿಸ್ ನಲ್ಲಿ, ಪಕ್ಷದಿಂದ ಉಚ್ಚಾಟನೆಗೊಂಡ ನಂತರವೂ, ಸಂಯೋಜಕರ ಸ್ಥಾನವು ಅಸ್ತಿತ್ವದಲ್ಲಿಲ್ಲದ ಕಾರಣ, ಪನ್ನೀರ್ ಸೆಲ್ವಂ ಅವರು ಪಕ್ಷದ ಸಂಯೋಜಕ ಮತ್ತು ಖಜಾಂಚಿಯಾಗಿ ತಮ್ಮನ್ನು ತಾವು ಬಿಂಬಿಸಿಕೊಳ್ಳುವುದನ್ನು ಮುಂದುವರಿಸಿದ್ದಾರೆ ಎಂದು ಆರೋಪಿಸಲಾಗಿದೆ.

- Advertisement -

ಎಐಎಡಿಎಂಕೆಯ ಹೆಸರು, ಅದರ ಸೀಲ್ ಅಥವಾ ಕಚೇರಿ ವಿಳಾಸವನ್ನು ಸಹ ಬಳಸಲು ಯಾವುದೇ ಹಕ್ಕಿಲ್ಲ ಎಂದು ನೋಟಿಸ್ ನಲ್ಲಿ  ಪನ್ನೀರ್ ಸೆಲ್ವಂ ಅವರಿಗೆ ತಿಳಿಸಲಾಗಿದೆ ಎಂದು ಪಕ್ಷದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Join Whatsapp