‘ಅಗ್ನಿಪಥ್’ ಬಿಜೆಪಿಯ ಅಜ್ಞಾನದ ಕೂಸು: ಡಾ. ಎಚ್‌ ಸಿ ಮಹದೇವಪ್ಪ

Prasthutha|

ಬೆಂಗಳೂರು: ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯು ಬಿಜೆಪಿಯ ಅಜ್ಞಾನದ ಕೂಸು ಎಂದು ಮಾಜಿ ಸಚಿವ ಡಾ. ಎಚ್‌ ಸಿ ಮಹದೇವಪ್ಪ ಲೇವಡಿ ಮಾಡಿದ್ದಾರೆ.

- Advertisement -

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಯುವಕರ ದೇಶಪ್ರೇಮವು 4 ವರ್ಷಕ್ಕೆ ಮಾತ್ರ ಸೀಮಿತವಾಗಿರುತ್ತದೆ ಎಂಬ ಬಿಜೆಪಿಗರ ಅಜ್ಞಾನದ ಕೂಸೇ ಈ ಅಗ್ನಿಪಥ್ ಯೋಜನೆ. ಸೇನೆಯ ಘನತೆ, ಗಾಂಭೀರ್ಯ ಮತ್ತು ಅದರ ಗಟ್ಟಿಯಾದ ವ್ಯವಸ್ಥೆಯನ್ನು ಹಾಳು ಮಾಡುವುದಕ್ಕೆ ಇದಕ್ಕಿಂತ ಉತ್ತಮ ಮಾರ್ಗವಿದೆಯೇ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Join Whatsapp