ಮುಸ್ಲಿಮರ ಬಳಿಕ ಫ್ಯಾಶಿಸ್ಟ್ ವರ್ಗ ಕ್ರಿಶ್ಚಿಯನ್ನರನ್ನು ಗುರಿಯಾಗಿಸುತ್ತಿದೆ: ಕಾಂಗ್ರೆಸ್ ಮುಖಂಡ ಚಿದಂಬರಂ ಆರೋಪ

Prasthutha|

ನವದೆಹಲಿ: ದೇಶದಲ್ಲಿ ಮುಸ್ಲಿಮರ ಬಳಿಕ ಇದೀಗ ಕ್ರಿಶ್ಚಿಯನ್ನರನ್ನು ಫ್ಯಾಶಿಸ್ಟ್ ವರ್ಗ ಗುರಿಯಾಗಿಸುತ್ತಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಹೇಳಿದ್ದಾರೆ.

- Advertisement -

ಮಿಷನರೀಸ್ ಆಫ್ ಚಾರಿಟಿ (ಎಫ್.ಸಿ.ಆರ್.ಎ) ನೋಂದಣಿಯನ್ನು ನವೀಕರಿಸಲು ಸರ್ಕಾರ ನಿರಾಕರಿಸಿದ್ದನ್ನು ಉಲ್ಲೇಖಿಸಿ ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.

ಗೋವಾದ ಕಾಂಗ್ರೆಸ್ ಚುನಾವಣಾ ಉಸ್ತುವಾರಿಯಾಗಿರುವ ಚಿದಂಬರಂ, ಮಿಷನರೀಸ್ ಆಫ್ ಚಾರಿಟಿ (MoC) ಗೆ ಸಂಬಂಧಿಸಿದ ಗೃಹ ಸಚಿವಾಲಯದ ಕ್ರಮವನ್ನು ಮುಖ್ಯ ಮಾಹಿನಿಯ ಮಾಧ್ಯಮಗಳು ವರದಿ ಮಾಡದಿರುವುದು ದುಃಖದಾಯಕ ಮತ್ತು ನಾಚಿಕೆಗೇಡಿನ ಪರಮಾವಧಿ ಎಂದು ಬಣ್ಣಿಸಿದ್ದಾರೆ.

- Advertisement -

ತನ್ನ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ ಚಿದಂಬರಂ, “MoC ಗೆ ನವೀಕರಣದ ನಿರಾಕರಣೆ ಭಾರತದ ಬಡವ ಮತ್ತು ನಿರ್ಗತಿಕರಿಗೆ ಉತ್ತಮ ಸೇವೆಯನ್ನು ಒದಗಿಸುತ್ತಿರುವ NGO ಗಳ ಮೇಲಿನ ನೇರ ದಾಳಿ” ಎಂದು ಬಣ್ಣಿಸಿದ್ದಾರೆ.

Join Whatsapp