ಮಥುರಾದಲ್ಲಿ ಮಾಂಸ, ಮದ್ಯ ಮಾರಾಟಕ್ಕೆ ನಿಷೇಧ ಹೇರಿದ ಯೋಗಿ ಸರ್ಕಾರ

Prasthutha|

ಕಾನ್ಪುರ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಥುರಾದಲ್ಲಿ ಮಾಂಸ ಮತ್ತು ಮದ್ಯ ಮಾರಾಟಕ್ಕೆ ಸಂಪೂರ್ಣವಾಗಿ ನಿಷೇಧ ಹೇರಿ ಆದೇಶ ಹೊರಡಿಸಿದ್ದಾರೆ.

- Advertisement -

ಈ ಅದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಪ್ರಬಲವಾದ ಯೋಜನೆ ರೂಪಿಸಲು ಮತ್ತು ಇಂತಹ ವ್ಯಾಪಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆಯೆಂದು ಯೋಗಿ ತಿಳಿಸಿದರು. ಅವರು ಕೃಷ್ಣೋತ್ಸವ 2021 ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಈ ಹೇಳಿಕೆಯನ್ನು ನೀಡಿದರು.

ಮಾಂಸ ಮತ್ತು ಮದ್ಯ ಮಾರಾಟಗಾರರು ತಮ್ಮ ಜೀವನೋಪಾಯಕ್ಕಾಗಿ ಹಾಲಿನ ಮಾರಾಟದಲ್ಲಿ ತೊಡಗುವ ಮೂಲಕ ಮಥುರಾದ ವೈಭವವನ್ನು ಕಾಪಾಡಲು ಯೋಜನೆ ಹಾಕಿಕೊಳ್ಳಲಿ ಎಂದು ಯೋಗಿ ಸಲಹೆ ನೀಡಿದರು.

- Advertisement -

ಕ್ಯಾಬಿನೆಟ್ ಮಂತ್ರಿಗಳಾದ ಲಕ್ಷ್ಮಿ ನಾರಾಯಣ್ ಚೌಧರಿ ಮತ್ತು ಶ್ರೀಕಾಂತ್ ಶರ್ಮಾ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Join Whatsapp