ಸ್ವಾತಂತ್ರ್ಯ ದಿನಾಚರಣೆಯ ಸಾರ್ವತ್ರಿಕ ರಜೆಯನ್ನು ರದ್ದುಪಡಿಸಿದ ಆದಿತ್ಯನಾಥ ಸರಕಾರ

Prasthutha|

ಲಕ್ನೋ: ಉತ್ತರ ಪ್ರದೇಶದ ಆದಿತ್ಯನಾಥ ಸರಕಾರವು ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಇದ್ದ ಸಾರ್ವತ್ರಿಕ ರಜೆಯನ್ನು ರದ್ದುಪಡಿಸಿ ಆದೇಶ ಹೊರಡಿಸಿದೆ.

- Advertisement -

ಭಾರತಕ್ಕೆ ಈಗಾಗಲೇ ಸ್ವಾತಂತ್ರ ದೊರಕಿ 74 ವರ್ಷಗಳು ಕಳೆದಿದ್ದು, ಮುಂಬುರುವ ಆಗಸ್ಟ್ 15 ರಂದು ಭಾರತವು ಸ್ವತಂತ್ರದ ಅಮೃತ ಮಹೋತ್ಸವನ್ನು ಆಚರಿಸಲಿದೆ.

ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಸರ್ಕಾರ ಸ್ವಾತಂತ್ರ್ಯ ದಿನಾಚರಣೆಯ ಸಾರ್ವತ್ರಿಕ ರಜೆಯನ್ನು ರದ್ದುಪಡಿಸಿದೆ. ಆ ಹಿನ್ನೆಲೆಯಲ್ಲಿ ಸ್ವಾತಂತ್ರ್ಯದ ದಿನ ಸಾರ್ವಜನಿಕರು ಕೆಲಸದಲ್ಲಿ ಸಕ್ರಿಯವಾಗುವ ಮೂಲಕ ಅರ್ಥಪೂರ್ಣವಾದ ಆಚರಣೆ ಮಾಡಬೇಕು ಎಂದು ಉತ್ತರಪ್ರದೇಶದ ರಾಜ್ಯ ಸರ್ಕಾರ ಹೇಳಿಕೊಂಡಿದೆ.

Join Whatsapp