ತೆಲುಗು ಕವಿ ವರವರ ರಾವ್ ನಾನಾವತಿ ಆಸ್ಪತ್ರೆಗೆ ವರ್ಗಾಯಿಸಲು ಹೈಕೋರ್ಟ್ ಸೂಚನೆ

Prasthutha|

ಮುಂಬೈ : ಎಲ್ಗಾರ್ ಪರಿಷದ್ ಪ್ರಕರಣದಲ್ಲಿ ಬಂಧಿತರಾಗಿರುವ ತೆಲುಗು ಕವಿ, ಸಾಮಾಜಿಕ ಕಾರ್ಯಕರ್ತ ವರವರ ರಾವ್ ಅವರನ್ನು ನಾನಾವತಿ ಆಸ್ಪತ್ರೆಗೆ ವರ್ಗಾಯಿಸಲು ಅನುಮತಿಸಲಾಗಿದೆ. ಅನಾರೋಗ್ಯ ಪೀಡಿತರಾಗಿರುವ ಅವರನ್ನು ಮುಂಬೈಯ ನಾನಾವತಿ ಆಸ್ಪತ್ರೆಗೆ 15 ದಿನಗಳ ಮಟ್ಟಿಗೆ ದಾಖಲಿಸಲು ಬಾಂಬೆ ಹೈಕೋರ್ಟ್ ಅನುಮತಿ ನೀಡಿದೆ.

- Advertisement -

ರಾವ್ ಅವರ ಪತ್ನಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ಕೋರ್ಟ್ ಈ ವಿವರಣೆ ನೀಡಿದೆ. ರಾವ್ ಅವರನ್ನು ನಾನಾವತಿ ಆಸ್ಪತ್ರೆಗೆ ದಾಖಲಿಸುವ ಅಗತ್ಯತೆಯನ್ನು ಕೋರ್ಟ್ ಗೆ ಅವರ ನ್ಯಾಯವಾದಿ ಇಂದಿರಾ ಜೈಸಿಂಗ್ ಮನವರಿಕೆ ಮಾಡಿದರು. ಆಸ್ಪತ್ರೆಗೆ ವರ್ಗಾಯಿಸದಿದ್ದರೆ, ರಾವ್ ಅವರು ಕಸ್ಟಡಿಯಲ್ಲೇ ಕೊನೆಯುಸಿರೆಳೆಯುವ ಸಾಧ್ಯತೆಯಿದೆ ಎಂದು ಇಂದಿರಾ ಕೋರ್ಟ್ ಗೆ ತಿಳಿಸಿದ್ದರು.

Join Whatsapp