ಲಂಚ ಪಡೆಯುವಾಗ ಎಸಿಬಿ ದಾಳಿ; ಇನ್‌ಸ್ಪೆಕ್ಟರ್ ಬಂಧನ

Prasthutha|

ಬೆಂಗಳೂರು: ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದಲ್ಲಿ ಚಿಕ್ಕಜಾಲ ಸಂಚಾರ ಠಾಣೆಯ ಇನ್‌‌ಸ್ಪೆಕ್ಟರ್ ಹಂಸವೇಣಿ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ.

- Advertisement -

ಚಿಕ್ಕಜಾಲ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗೇಲ್‌ ಗ್ಯಾಸ್ ಕಂಪೆನಿ ವತಿಯಿಂದ ನೈಸರ್ಗಿಕ ಅನಿಲ ಪೈಪ್ ಅಳವಡಿಕೆಗೆ ರಸ್ತೆ ಬದಿ ನೆಲ ಅಗೆಯಬೇಕಾಗಿದ್ದು, ಈ ಬಗ್ಗೆ ಅನುಮತಿ ಪಡೆಯಲು  ಸಂಚಾರ ಪೊಲೀಸರಿಗೆ ಪತ್ರ ಬರೆಯಲಾಗಿತ್ತು. ‌ ಆದರೆ ಅನುಮತಿ ನೀಡಬೇಕಾದರೆ‌ 20 ಸಾವಿರ ಲಂಚ ನೀಡಬೇಕೆಂದು ಇನ್ಸ್ಪೆಕ್ಟರ್ ಹಂಸವೇಣಿ ಬೇಡಿಕೆಯಿಟ್ಟಿದ್ದರು.

ಮಾಹಿತಿ ಪಡೆದ  ಎಸಿಬಿ ಅಧಿಕಾರಿಗಳು ಹಂಸವೇಣಿ ಅವರು ಲಂಚ ಪಡೆಯುವಾಗ ದಾಳಿ ನಡೆಸಿ ಹಣದ ಸಮೇತ ಬಂಧಿಸಿದ್ದಾರೆ.

Join Whatsapp