ಮನೆ ಮುಂದಿನ ಚರಂಡಿ ವಿಚಾರಕ್ಕೆ ಜಗಳ: ಪುರಸಭೆ ಸದಸ್ಯನಿಗೆ ಮಚ್ಚಿನಿಂದ ಕೊಚ್ಚಿದ ಯುವಕ

Prasthutha|

ಬಳ್ಳಾರಿ: ಯುವಕನೊಬ್ಬ ಮನೆಯ ಮುಂದಿನ ಚರಂಡಿ ವಿಚಾರಕ್ಕೆ ಪುರಸಭೆ ಸದಸ್ಯನೊಂದಿಗೆ ಜಗಳ ತೆಗೆದು, ಮಚ್ಚಿನಿಂದ ಕೊಚ್ಚಿ ಹಾಕಿದ ಘಟನೆ ಬಳ್ಳಾರಿ ಜಿಲ್ಲೆಯ ತೋರಣಗಲ್ಲು ಪಟ್ಟಣದ ರೈಲು ನಿಲ್ದಾಣ ಬಳಿಯ 11 ನೇ ವಾರ್ಡ್‌ ಘೋರ್ಪಡೆ ನಗರದಲ್ಲಿ ಘಟನೆ ನಡೆದಿದೆ.

- Advertisement -

ದೀಪಾವಳಿ ಹಬ್ಬಕ್ಕೆಂದು ಹೊಸ ಬಟ್ಟೆ ಖರೀದಿಸಿ ತಂದು ಮನೆಯಲ್ಲಿ ಹಬ್ಬ ಮಾಡಲು ಸಿದ್ಧತೆ ಮಾಡಿಕೊಂಡಿದ್ದ ತೋರಣಗಲ್ಲು ಪುರಸಭೆ ಸದಸ್ಯ ನಾಗರಾಜ ನಾಯಕ್ (32)ಗೆ ಶಿವಕುಮಾರ್‌ ಎಂಬ ಯುವಕ ಹಲವಾರು ಬಾರಿ ಮಚ್ಚಿನಿಂದ ಕೊಚ್ಚಿದ್ದಾನೆ.

ಪುರಸಭೆ ಸದಸ್ಯ ನಾಗರಾಜ ನಾಯ್ಕ ಮೇಲೆ ಮಚ್ಚಿನಿಂದ ತೆಲೆ, ಬೆನ್ನು ಹಾಗೂ ಕೈಗಳಿಗೆ ಕೊಚ್ಚಿ ಹಾಕಲಾಗಿದೆ. ಇನ್ನು ಘಟನೆಯ ಕಾರಣದ ಬಗ್ಗೆ ಮಾಹಿತಿ ನೀಡಿದ ಸ್ಥಳೀಯರು ಕಳೆದ ಒಂದು ವರ್ಷದಿಂದ ಮನೆ ಮುಂದೆ ಇರುವ ಚರಂಡಿ ವಿಚಾರವಾಗಿ ಪರಸ್ಪರ ಗಲಾಟೆ ಮಾಡಿಕೊಂಡು ಬರುತ್ತಿದ್ದಾರೆ. ಶಿವಕುಮಾರ್ ಮತ್ತು ನಾಗರಾಜ ನಾಯಕ್ ನಡುವೆ ಇಂದು ಬೆಳಗ್ಗೆ ಮಾತಿಗೆ ಮಾತು ಬೆಳೆದಿದೆ. ಗಾಯಾಳು ನಾಗರಾಜನಾಯಕರನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಕುರಿತಂತೆ ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Join Whatsapp