ಹುಬ್ಬಳ್ಳಿ ಈದ್ಗಾದಲ್ಲಿ‌ ಗಣೇಶೋತ್ಸವ: ಅನುಮತಿ ತಿರಸ್ಕರಿಸಲು ಹೈ ಕೋರ್ಟ್ ಮೊರೆ ಹೋದ ಅಂಜುಮನ್ ಇ ಇಸ್ಲಾಂ ಟ್ರಸ್ಟ್

Prasthutha|

ಹುಬ್ಬಳ್ಳಿ: ನಗರದ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ನೀಡಿದ ಧಾರವಾಡ ಜಿಲ್ಲಾ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಅಂಜುಮನ್ ಇ ಇಸ್ಲಾಂ ಟ್ರಸ್ಟ್ ಹೈ ಕೋರ್ಟ್ ಮೊರೆ ಹೋಗಿದೆ.

- Advertisement -

ಧಾರವಾಡ ಜಿಲ್ಲಾ ನ್ಯಾಯಾಲಯವು ವಕ್ಫ್ ಮಂಡಳಿಯ ಸೊತ್ತಾದ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಟ್ರಸ್ಟ್ ಸಮಿತಿ ಇಂದೇ ತುರ್ತು ವಿಚಾರಣೆ ನಡೆಸಲು ಮೇಲ್ಮನವಿ ಸಲ್ಲಿಸಿದ್ದು, ಅನುಮತಿ ನಿರಾಕರಿಸುವಂತೆ ಕೋರಿದೆ.

ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಹೈಕೋರ್ಟ್ ಅನುಮತಿಸಿದ್ದರೂ ಆ ಆದೇಶವನ್ನು ಸುಪ್ರೀಂ ಕೋರ್ಟ್ ಇಂದು ಸಂಜೆ ತಿರಸ್ಕಾರ ಮಾಡಿತ್ತು.



Join Whatsapp