ಮುಸ್ಲಿಮರ ಮತ್ತು ಕಾಂಗ್ರೆಸಿಗರ ಕೈ ಕಟ್ ಮಾಡುತ್ತೇವೆ: ನಾಲಿಗೆ ಹರಿಬಿಟ್ಟ ಮುತಾಲಿಕ್

Prasthutha|

- Advertisement -

ಬೆಳಗಾವಿ: ಗಣೇಶೋತ್ಸವ ಮಂಡಳಿಗಳಲ್ಲಿನ ಸಾವರ್ಕರ್ ಫೋಟೋ ಮುಟ್ಟಿದರೆ ಮುಸ್ಲಿಮರು ಮತ್ತು ಕಾಂಗ್ರೆಸ್ಸಿನವರ ಕೈ ಕತ್ತರಿ ಬಿಸಾಕುತ್ತೇವೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಮುತಾಲಿಕ್, ರಾಜ್ಯದ ಹತ್ತು ಸಾವಿರ ಗಣಪತಿ ಮಹಾಮಂಡಳಿಗಳಿಗೆ ಬ್ಯಾನರ್, ಫೋಟೋ ನೀಡುತ್ತೇವೆ. ಗಣಪತಿ ಪ್ರತಿಷ್ಠಾಪನೆ ಮಾಡುವವರೆಗೂ ಅಭಿಯಾನವನ್ನು ಮಾಡುತ್ತೇವೆ. ಎಲ್ಲ ಸಾರ್ವಜನಿಕ ಗಣಪತಿ ಮಂಟಪದಲ್ಲಿ ಬ್ಯಾನರ್ ಹಾಕುತ್ತೇವೆ.ಸಾರ್ವಕರ್ ಮುಸ್ಲಿಮರ ವಿರೋಧಿಯಲ್ಲ. ಬ್ರಿಟಿಷರ ವಿರುದ್ಧ ಹೋರಾಡಿದ ಅಪ್ಪಟ ಕ್ರಾಂತಿಕಾರಿ. ಹೀಗಾಗಿ ಅವರನ್ನ ಮುಟ್ಟಿದ್ರೆ ಕೈ ಕತ್ತರಿ ಬಿಸಾಕುತ್ತೇವೆ ಎಂದು ಹೇಳಿದ್ದಾರೆ.

- Advertisement -

ಕಾಂಗ್ರೆಸ್ ಇದನ್ನು ಎಚ್ಚರಿಕೆ ಅಂತಾ ತಿಳಿದುಕೊಂಡು ಹೆಜ್ಜೆ ಇಡಬೇಕು. ಯಾರು ಸಾವರ್ಕರ್ ಅವರನ್ನ ಅವಮಾನ ಮಾಡುವ ಕೆಲಸ ಮಾಡಬಾರದು. ಮಾಡಿದ್ರೆ ಬಿಡಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಸಾವರ್ಕರ್ ಸಮನಾಗಿ ಗಾಂಧೀಜಿನೂ ಇಲ್ಲ, ನೆಹರೂ ಇಲ್ಲ ಎಂದು ರಾಷ್ಟ್ರಪಿತನಿಗೆ ಅವಮಾನ ಮಾಡಿದ್ದಾರೆ.



Join Whatsapp