ಸಿಪಿಐಎಂ ಕಾರ್ಯಕರ್ತ ಶಾಜಹಾನ್ ಕೊಲೆ ಪ್ರಕರಣ; ಬಂಧಿತರಲ್ಲಿ ಓರ್ವ ಆರೆಸ್ಸೆಸ್ ಮುಖ್ಯ ಶಿಕ್ಷಕ್

Prasthutha|

ಪಾಲಕ್ಕಾಡ್: ಇತ್ತೀಚೆಗೆ ಹತ್ಯೆಯಾದ ಶಾಜಹಾನ್ ಕೊಲೆ ಪ್ರಕರಣಕ್ಕೆ  ಸಂಬಂಧಿಸಿ ಪೊಲೀಸರು ನಿನ್ನೆ ಮತ್ತೆ ನಾಲ್ವರನ್ನು ಬಂಧಿಸಿದ್ದು, ಬಂಧಿತರ ಪೈಕಿ ಓರ್ವ ಆರೆಸ್ಸೆಸ್ ಮುಖ್ಯ ಶಿಕ್ಷಕ್ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಆವಾಸ್, ಸಿದ್ಧಾರ್ಥನ್, ಜಿನೇಶ್ ಮತ್ತು ಬಿಜು ಎಂಬವರನ್ನು ನಿನ್ನೆ ಪೊಲೀಸರು ಬಂಧಿಸಿದ್ದು, ಈ ಪೈಕಿ ಆವಾಸ್ ಆರೆಸ್ಸೆಸ್‌ನ ಮುಖ್ಯ ಶಿಕ್ಷಕ್ ಎಂದು ಪೊಲೀಸರು ತಿಳಿಸಿದ್ದಾರೆ.

ಆವಾಸ್ ಮತ್ತು ಸಿದ್ಧಾರ್ಥನ್ ಕೊಲೆಗೆ ಸಂಚು ಮತ್ತು ಆಯುಧ ಪೂರೈಕೆ ಆರೋಪದಡಿ ಬಂಧಿಸಲಾಗಿದ್ದು, ಜಿನೇಶ್ ಮತ್ತು ಬಿಜುವನ್ನು ಆರೋಪಗಳಿಗೆ ಆಶ್ರಯ ನೀಡಿದ ಆರೋಪದಲ್ಲಿ ಬಂಧಿಸಲಾಗಿದೆ.

- Advertisement -

ಪ್ರಕರಣ ಸಂಬಂಧ ಈವರೆಗೆ  12 ಮಂದಿಯನ್ನು ಬಂಧಿಸಲಾಗಿದೆ. ನಿನ್ನೆ ಬಂಧಿಸಿದ ಆರೋಪಿಗಳಿಂದ ನಾಲ್ಕು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದರಲ್ಲಿ ಮಹತ್ವದ ದಾಖಲೆಗಳು ದೊರೆತಿದೆ ಎಂದು ಪೊಲೀಸರು ಹೇಳಿದ್ದಾರೆ.



Join Whatsapp