msf ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯಿಂದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಸಾಧಕರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ

Prasthutha|

- Advertisement -

ಮಂಗಳೂರು: ಮುಸ್ಲಿಂ ಸ್ಟೂಡೆಂಟ್ ಫೆಡರೇಶನ್(msf) ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯಿಂದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಸಾಧಕರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ನಗರದ ಮುಸ್ಲಿಂ ಸೆಂಟ್ರಲ್ ಕಮಿಟಿ ಹಾಲ್ ನಲ್ಲಿ ಭಾನುವಾರದಂದು ಜರುಗಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮುಸ್ಲಿಂ ಲೀಗ್ ಜಿಲ್ಲಾ ಅಧ್ಯಕ್ಷ ಫಯಾಝ್ ವಿದ್ಯಾರ್ಥಿಗಳ ಮುಂದಿನ ಭವಿಷ್ಯವು ಶುಭವಾಗಲಿ ಎಂದು ಹಿತ ವಚನ ನುಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ msf ವಿದ್ಯಾರ್ಥಿ ನಾಯಕಿ ಹಾಗೂ ಕಾನೂನು ಪದವಿ ವಿದ್ಯಾರ್ಥಿನಿಯಾದ ಫಾತಿಮತ್ ಸಾಲಿಸ ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವಿದ್ಯಾರ್ಥಿಗಳು ಜೀವನದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವ ಮೂಲಕ ದೇಶದ ಕೀರ್ತಿ ಎತ್ತರಕ್ಕೆ ಹಾರಿಸಬೇಕು ಎಂದು ಹೇಳಿದರು.

- Advertisement -


ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮುಸ್ಲಿಂ ಲೀಗ್ ಮುಖಂಡರಾದ ಕರೀಂ ಕಡಬ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್,ಪ್ರಸ್ಟೇಜ್ ಸ್ಕೂಲ್ ಕೌಂಸಿಲರ್ ಶಮಿರ್ ಯೂತ್ ಲೀಗ್ ಜಿಲ್ಲಾ ಅಧ್ಯಕ್ಷ ನೌಶಾದ್ ಮಲಾರ್, ನೌಫಲ್ ಅಜ್ಜಿಕಲ್ಲು,ಇಬ್ರಾಹಿಂ ಬಿ ಸಿ ರೋಡ್, ಅಬ್ದುಲ್ ಹಮೀದ್ ಬಂದರ್, ಮುಹಮ್ಮದ್ ಆರೀಫ್ ಮುಂತಾದವರು ಉಪಸ್ಥಿತರಿದ್ದರು ಇಸ್ರಾರ್ ಗೂಡಿನ ಬಳಿ ಸ್ವಾಗತಿಸಿ, ವಂದಿಸಿದರು.



Join Whatsapp