ಬೈಕ್ ಗೆ ಲಾರಿ ಡಿಕ್ಕಿ: ತಾಯಿ, ಮಗು ಸಾವು, ತಂದೆ ಗಂಭೀರ

Prasthutha|

ಬೆಂಗಳೂರು ; ಬುಲೆಟ್ ಬೈಕ್ ಗೆ ಟಿಪ್ಪರ್ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ತಾಯಿ, ಮಗು ಸ್ಥಳದಲ್ಲೇ ಸಾವನ್ನಪ್ಪಿ ತಂದೆ ಗಾಯಗೊಂಡಿರುವ ದಾರುಣ ಘಟನೆ ಮಾರತ್ ಹಳ್ಳಿ ಹೊರವರ್ತುಲ ರಸ್ತೆಯಲ್ಲಿ ನಡೆದಿದೆ.

- Advertisement -


ಕೆಆರ್ ಪುರಂನ ಶ್ರೀದೇವಿ (21) ಹಾಗೂ ಮಗು ದೀಕ್ಷಿತ( 1) ಮೃತ ದುರ್ದೈವಿಗಳು. ಮೃತ ಶ್ರೀದೇವಿ ಪತಿ ಶಿವಕುಮಾರ್ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬುಲೆಟ್ ಬೈಕ್ ನಲ್ಲಿ ಕೆಆರ್ ಪುರಂನಿಂದ ತಮಿಳುನಾಡಿನ ಧರ್ಮಪುರಿಗೆ ಇಂದು ಬೆಳಿಗ್ಗೆ ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಮಾರತ್ ಹಳ್ಳಿ ಹೊರವರ್ತುಲ ಬಳಿ ಬುಲೆಟ್ ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬುಲೆಟ್ ನ ಹಿಂಬದಿಯಲ್ಲಿದ್ದ ತಾಯಿ ಮಗು ಬಲಕ್ಕೆ ಬಿದ್ದು ಚಕ್ರ ಹರಿದು ಸ್ಥಳದಲ್ಲೇ ಸಾವನ್ನಪ್ಪಿದರೆ, ಎಡಕ್ಕೆ ಬಿದ್ದ ಪತಿಗೆ ಸಣ್ಣಪುಟ್ಟ ಗಾಯಗಳಾಗಿವೆ.


ಅಪಘಾತ ಕಂಡರೂ ಸಾರ್ವನಿಕರು, ವಾಹನ ಸವಾರರ, ಸಹಾಯಕ್ಕೂ ಬಾರದೆ ಮಾನವೀಯತೆ ಮರೆತು ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಎಚ್ ಎಎಲ್ ಸಂಚಾರಿ ಪೊಲೀಸರು ಅಪಘಾತ ಗೊಂಡ ವಾಹನಗಳನ್ನು ತೆರವುಗೊಳಿಸಿ ಪರಿಹಾರ ಕ್ರಮ ಕೈಗೊಂಡಿದ್ದಾರೆ. ಅಪಘಾತ ಪ್ರಕರಣ ದಾಖಲಿಸಿ ಲಾರಿ ಬಿಟ್ಟು ಪರಾರಿಯಾದ ಲಾರಿ ಚಾಲಕನ ಪತ್ತೆಗೆ ಶೋಧ ನಡೆಸಿದ್ದಾರೆ ಎಂದು ಡಿಸಿಪಿ ಶಾಂತರಾಜು ತಿಳಿಸಿದ್ದಾರೆ



Join Whatsapp