ಹಿಂದುತ್ವದ ಸುದ್ದಿಗೆ ಬಂದರೆ ಅನುಭವಿಸುತ್ತೀರಿ: ಈಶ್ವರಪ್ಪ ಎಚ್ಚರಿಕೆ !

Prasthutha|

ಶಿವಮೊಗ್ಗ: ಹಿಂದುತ್ವದ ಸುದ್ದಿಗೆ ಬಂದರೆ ಗಂಭೀರ ಪರಿಣಾಮ ಅನುಭವಿಸಬೇಕಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್. ಈಶ್ವರಪ್ಪ ಎಚ್ಚರಿಸಿದ್ದಾರೆ.

- Advertisement -


ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಶಿರಾಳಕೊಪ್ಪದಲ್ಲಿ ಚೈತ್ರಾ ಕುಂದಾಪುರ ಅವರ ಹೇಳಿಕೆಯನ್ನು ಹಿಂದೂ ಯುವಕನೊಬ್ಬ ತನ್ನ ಮೊಬೈಲ್ ಸ್ಟೇಟಸ್ ನಲ್ಲಿ ಹಾಕಿಕೊಂಡಿದ್ದಕ್ಕೆ ಅಂಗಡಿಗೆ ನುಗ್ಗಿ ಹೊಡೆಯುತ್ತಾರೆ ಎಂದು ಅವರಿಗೆ ಎಷ್ಟು ಸೊಕ್ಕುಇರಬೇಕು ಎಂದು ಪ್ರಶ್ನಿಸಿದರು.


ಈ ರೀತಿ ನಡೆದುಕೊಳ್ಳುವುದು ಎಲ್ಲಾ ಮುಸ್ಲಿಮರಲ್ಲ ಎಂದು ಸ್ಪಷ್ಟಪಡಿಸಿದ ಅವರು, ಆದರೆ ಹೀಗೆ ನಡೆದುಕೊಳ್ಳುವ ಮುಸ್ಲಿಮರು ಎಚ್ಚರಿಕೆಯಿಂದ ಇರಬೇಕು. ಇದನ್ನು ರಾಜ್ಯದಲ್ಲಾಗಲಿ, ದೇಶದಲ್ಲಾಗಲಿ ನಡೆಯಲು ಬಿಡುವುದಿಲ್ಲ, ಹಿಂದುತ್ವದ ಸುದ್ದಿಗೆ ಬಂದರೆ ಅನುಭವಿಸುತ್ತೀರಿ ಎಂದು ಈಶ್ವರಪ್ಪ ಹೇಳಿದರು.

Join Whatsapp