ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ ರಾಜ್ಯದ ಮೂವರು ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನ ಘೋಷಣೆ

Prasthutha|

ಬೆಂಗಳೂರು: ಟೋಕಿಯೋ ಒಲಿಂಪಿಕ್ಸ್-2020ರ ಕ್ರೀಡಾಕೂಟದಲ್ಲಿ ರಾಜ್ಯದ ಕ್ರೀಡಾಪಟುಗಳು ಮತ್ತು ಕ್ರೀಡಾ ತರಬೇತುದಾರರಿಗೆ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಪ್ರೋತ್ಸಾಹ ಧನ ಪ್ರಕಟಿಸಿದ್ದಾರೆ.

- Advertisement -

ಅಥಿತಿ ಅಶೋಕ್ (ಗಾಲ್ಫ್), ಫೌದಾ ಮಿರ್ಜಾ (ಕುದುರೆ ಸವಾರಿ), ಶ್ರೀಹರಿ ನಟರಾಜ್ (ಈಜು) ಕ್ರೀಡಾಪಟುಗಳಿಗೆ ಹಾಗೂ ಕ್ರೀಡಾ ತರಬೇತುದಾರರಾದ ಅಂಕಿತಾ ಸುರೇಶ್ (ಮಹಿಳಾ ಹಾಕಿ ) ಅವರಿಗೆ ತಲಾ 1,00,000 ರೂಪಾಯಿ ಪ್ರೋತ್ಸಾಹ ಧನ ನೀಡಲಾಗುವುದು. ಇವರನ್ನು ಇವರನ್ನು ಶೀಘ್ರದಲ್ಲೇ ರಾಜಭವನದಲ್ಲಿ ಆಯೋಜಿಸುವ ಸಮಾರಂಭದಲ್ಲಿ ಸನ್ಮಾನಿಸಲಿದ್ದಾರೆ ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್ ಪ್ರಭುಶಂಕರ್ ತಿಳಿಸಿದ್ದಾರೆ.



Join Whatsapp