ಮಂಜೇಶ್ವರ: ರಕ್ಷಣಾ ಕಾರ್ಯಾಚರಣೆಗೆ ಅವಶ್ಯ ಯಂತ್ರಗಳ ಕೊಡುಗೆ

Prasthutha|

ಮಂಜೇಶ್ವರ: ಲಾಕ್ಡೌನ್ ಮತ್ತು ಅತಿವೃಷ್ಟಿಯ ಪರಿಸ್ಥಿತಿಯಲ್ಲಿಯೂ ಸಮಾಜ ಸೇವೆ ಹಾಗೂ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಮಂಜೇಶ್ವರ ಎಸ್.ಡಿ.ಪಿ.ಐ ವಲಂಟಿಯರ್ಸ್ ತಂಡಕ್ಕೆ ಮಂಜೇಶ್ವರ ಪ್ರವಾಸ ಲೋಕ – ವಾಟ್ಸಪ್ ತಂಡವು ಹುಲ್ಲು ಕತ್ತರಿಸುವ ಯಂತ್ರ ಮತ್ತು ಹೊಗೆ ಯಂತ್ರ ಗಳನ್ನು ಕೊಡುಗೆಯಾಗಿ ನೀಡಿದೆ.

- Advertisement -


ಎಸ್ ಡಿಪಿಐ ಜಿಲ್ಲಾಧ್ಯಕ್ಷ ಇಕ್ಬಾಲ್ ಹೊಸಂಗಡಿ ಹಾಗೂ ಎಸ್ ಡಿಪಿಐ ಮಂಡಲ ಅಧ್ಯಕ್ಷ ಅನ್ಸಾರ್ ಹೊಸಂಗಡಿಯವರಿಗೆ ಈ ಯಂತ್ರಗಳನ್ನು ಹಸ್ತಾಂತರಿಸಲಾಯಿತು.
ಬ್ಲಾಕ್ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಹಮೀದ್ ಹೊಸಂಗಡಿ, ಪಾಪ್ಯುಲರ್ ಫ್ರಂಟ್ ಮಂಜೇಶ್ವರ ಡಿವಿಷನ್ ಅಧ್ಯಕ್ಷರಾದ ಶಬೀರ್ ಪೊಸೋಟ್ಟು, ಎಸ್ ಡಿಪಿಐ ಮಂಜೇಶ್ವರ ಮಂಡಲ ಕಾರ್ಯದರ್ಶಿ ಮುಬಾರಕ್ ಕಡಂಬಾರ್, ಎಸ್ ಪಿಐ ಮಂಜೇಶ್ವರ ಪಂಚಾಯತ್ ಅಧ್ಯಕ್ಷ ಅಶ್ರಫ್ ಬಡಾಜೆ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Join Whatsapp