ಸಿಎಂ ಆಯ್ಕೆ ಮಾಡಲು ನೀವ್ಯಾರು? ನೀವೇನು ಒರಿಜಿನಲ್ ಬಿಜೆಪಿನಾ?: ವಿಶ್ವನಾಥ್ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ

Prasthutha|

ಬೆಂಗಳೂರು: “ಯಡಿಯೂರಪ್ಪನವರಿಗೆ ವಯಸ್ಸಾಗಿದೆ, ರಾಜ್ಯವನ್ನ ಮುನ್ನಡೆಸುವ ಶಕ್ತಿ ಕಳೆದುಕೊಂಡಿದ್ದಾರೆ” ಅನ್ನೋ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಹೇಳಿಕೆ ಬೆನ್ನಲ್ಲೇ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹಾಗೂ ಯಡಿಯೂರಪ್ಪ ಆಪ್ತ ಬಣದ ಶಾಸಕರು ‘ಹಳ್ಳಿ ಹಕ್ಕಿ’ ವಿರುದ್ಧ ಮುಗಿ ಬಿದ್ದಿದ್ದಾರೆ.

- Advertisement -

ಸಿಎಂ ನಿವಾಸ ಬಳಿ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ಯಡಿಯೂರಪ್ಪನವರ ವಯಸ್ಸಿನ ಬಗ್ಗೆ ಮಾತಾಡೋ ನಿಮ್ ವಯಸ್ಸೆಷ್ಟು? ನೀವೇನು ಒರಿಜಿನಲ್ ಬಿಜೆಪಿನಾ? ಯಡಿಯೂರಪ್ಪನವರ ಬಗ್ಗೆ ಮಾತಾಡಲು ನಿಮ್ಗೆ ಏನ್ ಅರ್ಹತೆ ಇದೆ? ಎಂದು ಪ್ರಶ್ನಿಸಿದ್ದಾರೆ.

ವಿಶ್ವನಾಥ್ ಅವರು ಕಾಂಗ್ರೆಸ್, ಜೆಡಿಎಸ್ ನಲ್ಲಿ ಅಧಿಕಾರ ಅನುಭವಿಸಿ ಆನಂತರ ಮೋಸ ಮಾಡಿದವರು. ಎಸ್ಎಂ ಕೃಷ್ಣ, ಸಿದ್ದರಾಮಯ್ಯ, ದೇವೇಗೌಡ ಹಾಗೂ ಕುಮಾರಸ್ವಾಮಿ ಅವರಿಗೆ ಮೋಸ ಮಾಡಿದ್ದಾರೆ. ಪಕ್ಷದಲ್ಲಿದ್ದು ಅದರ ವಿರುದ್ಧ ಮಾತಾಡುವುದು ವಿಶ್ವನಾಥ್ ಅವರಿಗೆ ಅಭ್ಯಾಸವಾಗಿದೆ.

- Advertisement -

ರಾಜ್ಯದಲ್ಲಿ ಸಿಎಂ ಆಯ್ಕೆ ಮಾಡಲು ಶಾಸಕರು,ರಾಷ್ಟ್ರೀಯ ನಾಯಕರು ಇದ್ದಾರೆ. ವಿಧಾನ ಪರಿಷತ್ ಸದಸ್ಯರಾದವರು ಆಯ್ಕೆ ಮಾಡುವುದು ಬೇಕಿಲ್ಲ ಎಂದಿದ್ದಾರೆ.

ಇನ್ನು ಸಿಎಂ ಆಪ್ತ ಬಣದ ಶಾಸಕರಾದ ಎಸ್.ಆರ್. ವಿಶ್ವನಾಥ್, ಹರತಾಳು ಹಾಲಪ್ಪ ಕೂಡಾ ವಿಶ್ವನಾಥ್ ವಿರುದ್ಧ ಹರಿಹಾಯ್ದಿದ್ದಾರೆ.

Join Whatsapp