ಕಮಲ್ ಹಾಸನ್ ಸಂಚರಿಸುತ್ತಿದ್ದ ಚುನಾವಣಾ ಪ್ರಚಾರ ವಾಹನವನ್ನು ತಡೆದು ದಿಢೀರ್ ತಪಾಸಣೆ ನಡೆಸಿದ ಚುನಾವಣಾ ಆಯೋಗ

Prasthutha|

ನಟ ಮತ್ತು ಮಕ್ಕಳ್ ನೀದಿ ಮಯ್ಯಂ ಪಕ್ಷದ ನಾಯಕ ಕಮಲ್ ಹಾಸನ್ ಅವರು ಸಂಚರಿಸುತ್ತಿದ್ದ ಕಾರವಾನ್ ಅನ್ನು ತಂಜಾವೂರು ಗಡಿಯಲ್ಲಿ ಚುನಾವಣಾ ಆಯೋಗದ ಫ್ಲೈಯಿಂಗ್ ಸ್ಕ್ವಾಡ್ ತಡೆದು ದಿಢೀರ್ ತಪಾಸಣೆ ನಡೆಸಿದೆ.

- Advertisement -

ತಿರುಚಿರಾಪಳ್ಳಿಯ ಸಾರ್ವಜನಿಕ ಸಭೆಗೆ ಹೋಗುವ ದಾರಿಯಲ್ಲಿ ಚುನಾವಣಾ ಆಯೋಗದ ಫ್ಲೈಯಿಂಗ್ ಸ್ಕ್ವಾಡ್ ವಾಹನವನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದೆ. ಆದಾಯ ತೆರಿಗೆ ಇಲಾಖೆ ಇತ್ತೀಚೆಗೆ ಕಮಲ್ ಹಾಸನ್ ಅವರ ಮನೆಯ ಮೇಲೆ ದಾಳಿ ನಡೆಸಿತ್ತು. “ಕೇಂದ್ರ ಏಜೆನ್ಸಿಗಳ ಈ ದಾಳಿಯು ಬಿಜೆಪಿ ನಡೆಸುವ ಬೆದರಿಕೆ ರಾಜಕೀಯವಾಗಿದೆ. ನಾನು ಇಂತಹಾ ದಾಳಿಗಳಿಗೆ ಹೆದರುವುದಿಲ್ಲ. ನನ್ನ ಮನೆಯಲ್ಲಿ ಅವರಿಗೆ ಏನೂ ಸಿಗಲು ಸಾಧ್ಯವಿಲ್ಲ” ಎಂದು ಕಮಲ್ ಹಾಸನ್ ಹೇಳಿದ್ದರು.

ಈ ಚುನಾವಣೆ ಮೂಲಕ ಕಮಲ್ ಹಾಸನ್ ತಮಿಳುನಾಡು ವಿಧಾನಸಭೆಗೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಕಮಲ್ ಕೊಯಮತ್ತೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಈ ಕ್ಷೇತ್ರದಲ್ಲಿ ಕೋಮು ಧ್ರುವೀಕರಣ ನಡೆಯುತ್ತಿದೆ. ಆದ್ದರಿಂದ ಇದರ ವಿರುದ್ಧ ಹೋರಾಡಬೇಕು ಎಂದು ಕಮಲ್ ಹಾಸನ್ ಈ ಹಿಂದೆ ಹೇಳಿದ್ದರು. ಮ್ಯಾಂಚೆಸ್ಟರ್ ಆಫ್ ಸೌತ್ ಎಂದು ಕರೆಯಲ್ಪಡುವ ನಗರವು ತನ್ನ ಹೆಮ್ಮೆ ಮತ್ತು ವೈಭವವನ್ನು ಕಳೆದುಕೊಳ್ಳದಂತೆ ನೋಡಿಕೊಂಡು ಕೆಲಸ ಮಾಡುವುದಾಗಿ ಕಮಲ್ ಹಾಸನ್ ಭರವಸೆ ನೀಡಿದ್ದರು.

Join Whatsapp