ಕೇರಳದಿಂದ ರಾಹುಲ್ ಸ್ಪರ್ಧೆ: ಸಂಸದ ಮುರಳೀಧರನ್

Prasthutha|

ಕೇರಳ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇರಳದ ವಯನಾಡ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಸಂಸದ ಕೆ.ಮುರಳೀಧರನ್ ಹೇಳಿದ್ದಾರೆ.

- Advertisement -

ರಾಹುಲ್ ಗಾಂಧಿ ವಯನಾಡಿನಿಂದಲೇ ಸ್ಪರ್ಧಿಸುತ್ತಾರೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅವರು ತಿಳಿಸಿದ್ದಾರೆ.

INDIA ಮೈತ್ರಿಯಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಅವರೆಲ್ಲರೂ ಕೇಂದ್ರ ಸರ್ಕಾರದ ಸಂಬಂಧಿಸಿದ ಸುದ್ದಿ ಬಂದಾಗ ಬಿಜೆಪಿ ವಿರುದ್ಧ ಎಲ್ಲರೂ ಒಟ್ಟಾಗಿರುತ್ತಾರೆ ಎಂದೂ ಹೇಳಿದ್ದಾರೆ.

- Advertisement -

ಬಿಹಾರ ಮುಖ್ಯಮಂತ್ರಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಂಸದರು, ಅವರು ತಮ್ಮ ಇಚ್ಛೆಯಂತೆ ಮೈತ್ರಿಯಲ್ಲಿ ಉಳಿಯಬಹುದು ಅಥವಾ ಬಿಡಬಹುದು, ಆದರೆ ಇಂಡಿಯಾ ಮೈತ್ರಿಕೂಟ ಅವರನ್ನು ಹೊರಹಾಕುವುದಿಲ್ಲ ಎಂದು ಹೇಳಿದರು.



Join Whatsapp