ಪೊಲೀಸ್ ಅಧಿಕಾರಿಗೆ ಕೊಲೆ ಬೆದರಿಕೆ ಹಾಕಿದ ಬಿಜೆಪಿ ಮುಖಂಡ

Prasthutha|

ಕಲ್ಲೀಕೋಟೆ: ಬಿಜೆಪಿ ಮುಖಂಡರೊಬ್ಬರು ಪೊಲೀಸ್ ಅಧಿಕಾರಿಗೆ ಕೊಲೆ ಬೆದರಿಕೆ ಹಾಕಿದ ಘಟನೆ ಕೇರಳದ ಕಲ್ಲೀಕೋಟೆಯಲ್ಲಿ ನಡೆದಿದೆ. ಬಿಜೆಪಿಯ ಯುವಮೋರ್ಚಾ ಕಾರ್ಯಕರ್ತನಿಗೆ ಥಳಿಸಿದ ನಡಕ್ಕಾವ್ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರ ವಿರುದ್ಧ ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರು ಜೀವ ಬೆದರಿಕೆ ಹಾಕಿದ್ದಾರೆ ಎಂದು ವರದಿಯಾಗಿದೆ.

- Advertisement -


ಪ್ರತಿಭಟನೆಯ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಿನೀಶ್, ನಡಕ್ಕಾವ್ ವೃತ್ತ ನಿರೀಕ್ಷಕನ ಮೈಯ್ಯಲ್ಲಿ ಸಮವಸ್ತ್ರ ಇಲ್ಲದಿರುತ್ತಿದ್ದರೆ ಆತನ ಹೆಣ ಬೀಳುತ್ತಿತ್ತು ಎಂದು ಜೀವ ಬೆದರಿಕೆ ಹಾಕಿದ್ದಾರೆ. ಪ್ರಸ್ತುತ ಜೈಲು ಶಿಕ್ಷೆ ಅನುಭವಿಸುತ್ತಿರುವ ಬಿಜೆಪಿಯ ಕಾರ್ಯಕರ್ತರು ಮಾವಿನ ಹಣ್ಣು ಕೀಳಿ ಜೈಲಿಗೆ ಹೋಗಿಲ್ಲ ಎಂದು ರಿನೀಶ್ ಪ್ರತಿಭಟನೆಯ ವೇಳೆ ಹೇಳಿಕೆ ನೀಡಿದ್ದಾರೆ.


ರಿನೀಶ್ ಕಲ್ಲೀಕೋಟೆ ಕಾರ್ಪೊರೇಷನ್ ಕೌನ್ಸಿಲರ್ ಆಗಿದ್ದಾರೆ. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಮೋಹನನ್ ಮಾತನಾಡಿ, ಹೀಗೆ ಮುಂದುವರಿದರೆ ಸಿಐ ಜಿಜೀಶ್ ನ ಕೈಯನ್ನು ಕತ್ತರಿಸಿ ಹಾಕಲಿದ್ದೇವೆ ಎಂದು ಬೆದರಿಕೆ ಹಾಕಿದ್ದಾರೆ.



Join Whatsapp