ಮಗನ ವರ್ತನೆಯಿಂದ ಬೇಸತ್ತು ಸಾಕು ನಾಯಿಗೆ ಆಸ್ತಿಯಲ್ಲಿ ಪಾಲು ಬರೆದಿಟ್ಟ ರೈತ!

Prasthutha|

ಭೋಪಾಲ್ : ಮಗನ ವರ್ತನೆಯಿಂದ ಬೇಸತ್ತ ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯ 50 ವರ್ಷದ ರೈತರೊಬ್ಬರು ತಮ್ಮ ಆಸ್ತಿಯಲ್ಲಿ ಅರ್ಧ ಪಾಲು ಪತ್ನಿಗೂ, ಉಳಿದ ಅರ್ಧ ಪಾಲನ್ನು ಸಾಕು ನಾಯಿಗೂ ಮೀಸಲಿಟ್ಟು ವಿಲ್ ಸಿದ್ಧಪಡಿಸಿದ ಬಗ್ಗೆ ವರದಿಯಾಗಿದೆ.

- Advertisement -

ಎರಡು ದಿನಗಳ ಹಿಂದೆ ಓಂ ನಾರಾಯಣ್ ತಮ್ಮ ವಿಲ್ ಅನ್ನು ನೋಟರಿ ಮಾಡಿಸಿದ್ದಾರೆ. ತಮಗೆ ನಾಲ್ಕು ಎಕರೆ ಜಮೀನಿದ್ದು, ಈ ಜಮೀನನ್ನು ತನ್ನ ಮರಣಾ ನಂತರ ಪತ್ನಿ ಹಾಗೂ ಸಾಕು ನಾಯಿಗೆ ಸಮಾನಾಂತರ ಹಂಚುವಂತೆ ಈ ಪತ್ರದಲ್ಲಿ ಬರೆಸಿದ್ದಾರೆ.

ತಮ್ಮ ನಾಯಿ ಮತ್ತು ಪತ್ನಿ ತಮಗೆ ಹೆಚ್ಚು ಸೇವೆ ಮಾಡಿದ್ದಾರೆ. ಹೀಗಾಗಿ ಅವರೇ ತಮಗೆ ಹೆಚ್ಚು ಆಪ್ತರು ಎಂದು ಓಂ ನಾರಾಯಣ್ ಬರೆಸಿದ್ದಾರೆ. ನಾಯಿ ಸತ್ತ ಬಳಿಕ, ಆ ನಾಯಿಯನ್ನು ಯಾರು ಚೆನ್ನಾಗಿ ನೋಡಿಕೊಳ್ಳುತ್ತಾರೋ ಅವರಿಗೆ ಆ ಆಸ್ತಿ ದೊರೆಯಬೇಕು ಎಂದೂ ಅವರು ಸೂಚಿಸಿದ್ದಾರೆ.     

Join Whatsapp