ಮತ್ತೊಂದು ಜಾತಿದ್ವೇಷದ ಕೊಲೆ | ಕುರುವ ಸಮುದಾಯದ ಹುಡುಗಿಯ ವಿವಾಹವಾದ ದಲಿತ ಯುವಕನ ಹತ್ಯೆಗೈದ ಜಾತಿವಾದಿ ಉಗ್ರರು

Prasthutha|

ಕರ್ನೂಲ್ : ಒಂದೂವರೆ ತಿಂಗಳ ಹಿಂದೆಯಷ್ಟೇ ವಿವಾಹವಾದ ದಲಿತ ಯುವಕನೊಬ್ಬನನ್ನು ಹಾಡಹಗಲೇ ಹತ್ಯೆ ಮಾಡಿದ ಘಟನೆ ಕರ್ನೂಲ್ ಜಿಲ್ಲೆಯ ಅದೋನಿ ಪಟ್ಟಣದಲ್ಲಿ ನಡೆದಿದೆ. ಆತ ವಿವಾಹವಾದ ಹುಡುಗಿಯ ಕಡೆಯವರು ಎನ್ನಲಾದ ಇಬ್ಬರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

- Advertisement -

ಹೊಸ ವರ್ಷ ಆಚರಣೆಗಾಗಿ ಕೇಕ್ ತೆಗೆದುಕೊಂಡು ಮನೆಗೆ ಹಿಂದಿರುಗುತ್ತಿದ್ದ ಯುವಕನನ್ನು ಇಬ್ಬರು ವ್ಯಕ್ತಿಗಳು ತಡೆದು ನಿಲ್ಲಿಸಿ, ಕಬ್ಬಿಣದ ಸಲಾಕೆ ಮತ್ತು ಕಲ್ಲಿನಲ್ಲಿ ದಾಳಿ ನಡೆಸಿದ್ದಾರೆ.

ಕಬ್ಬಿಣದ ಸಲಾಕೆಯಿಂದ ಹೊಡೆದು, ಬಳಿಕ ಕಲ್ಲಿನಿಂದ ತಲೆಯನ್ನು ಜಜ್ಜಲಾಗಿದೆ. ಸ್ಥಳದಲ್ಲೇ ಆತ ಸಾವಿಗೀಡಾಗಿದ್ದಾನೆ. ಮೃತನನ್ನು ಆಡಂ ಸ್ಮಿತ್ ಎಂದು ಗುರುತಿಸಲಾಗಿದೆ. ಆಡಂ ಸ್ಮಿತ್ ದಲಿತ ಕ್ರೈಸ್ತನಾಗಿದ್ದು, ಫಿಸಿಯೋಥೆರಪಿ ಕೆಲಸ ಮಾಡುತ್ತಿದ್ದನು. ಮಹೇಶ್ವರಿ (25) ಪದವಿ ಮುಗಿಸಿ, ಬ್ಯಾಂಕಿಂಗ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಳು. ಇಬ್ಬರ ನಡುವೆ ಪ್ರೀತಿಯಾಗಿ, ಇತ್ತೀಚೆಗೆ ಮದುವೆಯಾಗಿದ್ದರು. ಬಳಿಕ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು.  

- Advertisement -

ಮಹೇಶ್ವರಿ ಒಬಿಸಿ ವರ್ಗದಲ್ಲಿ ಬರುವ ಕುರುವ ಸಮುದಾಯಕ್ಕೆ ಸೇರಿದವಳಾಗಿದ್ದಾಳೆ. ಘಟನೆಗೆ ಸಂಬಂಧಿಸಿ ಆಕೆ ನೀಡಿರುವ ದೂರಿನ ಆಧಾರದಲ್ಲಿ ಆಕೆಯ ತಂದೆ ಚಿನ್ನ ಈರಣ್ಣ ಮತ್ತು ಅಂಕಲ್ ಪೆದ್ದ ಈರಣ್ಣ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.  

Join Whatsapp