ಚಿಕ್ಕಮಗಳೂರು: ಮನೆ ಮನೆಗಳಿಗೆ ತೆರಳಿ ಶಾಸಕ ಸಿ.ಟಿ.ರವಿ ಭಿಕ್ಷಾಟನೆ

Prasthutha|

ಚಿಕ್ಕಮಗಳೂರು: ದತ್ತಜಯಂತಿ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಚಿಕ್ಕಮಗಳೂರು ನಗರದಲ್ಲಿ ಶಾಸಕ ಸಿ.ಟಿ.ರವಿ ಭಿಕ್ಷಾಟನೆ ನಡೆಸಿದರು.

- Advertisement -


ನಗರದ ನಾರಯಣಪುರ, ರಾಘವೇಂದ್ರ ಮಠದ ರಸ್ತೆ ಬಸವನಹಳ್ಳಿ ಮುಖ್ಯ ರಸ್ತೆಗಳಲ್ಲಿ ಸಿ.ಟಿ.ರವಿ ನೇತೃತ್ವದಲ್ಲಿ ಭಿಕ್ಷಾಟನೆ ನಡೆಯಿತು. ತೆಂಗಿನಕಾಯಿ, ಬಾಳೆಹಣ್ಣು, ಅಕ್ಕಿ, ವಿಳ್ಯೆದೆಲೆ, ಅಡಿಕೆ –ಬೆಲ್ಲವನ್ನು ಸಾರ್ವಜನಿಕರು ಭಿಕ್ಷೆ ನೀಡಿದರು.


ನಗರದ ನಾರಾಯಣಪುರ, ರಾಘವೇಂದ್ರ ಮಠದ ರಸ್ತೆ, ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿ ಬಿಕ್ಷಾಟನೆ ನಡೆಸಿ ಪಡಿ ಸಂಗ್ರಹ ಮಾಡಿದರು.

- Advertisement -


ಇಂದು ಮಧ್ಯಾಹ್ನ ನಗರದಲ್ಲಿ ಸಾವಿರಾರು ಮಂದಿ ಸೇರಿ ಶೋಭಾಯಾತ್ರೆ ನಡೆಸಲಿದ್ದು, ಜಿಲ್ಲಾದ್ಯಂತ ಹೈ ಅಲರ್ಟ್ ಘೋಷಿಸಿರುವ ಪೊಲೀಸರು ಬಿಗು ಭದ್ರತೆ ಕಲ್ಪಿಸಿದ್ದಾರೆ.



Join Whatsapp