ಕಾಣಿಯೂರು ಘಟನೆ ಖಂಡಿಸಿ ಪುತ್ತೂರಿನಲ್ಲಿ ಇಂದು ಮಧ್ಯಾಹ್ನ ಬೃಹತ್ ಪ್ರತಿಭಟನೆ

Prasthutha|

ಟ್ರಾಫಿಕ್ ಸಮಸ್ಯೆ ಮನಗಂಡು ಜಾಥಾ ರದ್ದು

- Advertisement -


ಪುತ್ತೂರು: ಕಾಣಿಯೂರಿನಲ್ಲಿ ನಡೆದ ಅಮಾಯಕ ಮುಸ್ಲಿಮ್ ಬಟ್ಟೆ ವ್ಯಾಪಾರಿಗಳ ಮೇಲಿನ ಅಮಾನುಷ ಹಲ್ಲೆ, ಕೊಲೆಯತ್ನ ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಆಶ್ರಯದಲ್ಲಿ ಶುಕ್ರವಾರ ಪುತ್ತೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ.


ಆದರೆ ನ್ಯಾಯಕ್ಕಾಗಿ ಆಗ್ರಹಿಸಿ ದರ್ಬೆಯಿಂದ ಎಸಿ ಕಚೇರಿವರೆಗೆ ನಡೆಸಲು ಉದ್ದೇಶಿಸಿದ್ದ ಮೆರವಣಿಗೆಯನ್ನು ಸಾರ್ವಜನಿಕ ಸುಗಮ ಸಂಚಾರ ಹಾಗೂ ಟ್ರಾಫಿಕ್ ಸಮಸ್ಯೆಯನ್ನು ಮನೆಗಂಡು ರದ್ದುಗೊಳಿಸಲಾಗಿದೆ. ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ಪುತ್ತೂರು ಕಿಲ್ಲೆ ಮೈದಾನದಲ್ಲಿ ಖಂಡನಾ ಸಭೆ ನಡೆದು, ಪುತ್ತೂರು ಸಹಾಯಕ ಕಮಿಷನರ್ ಅವರಿಗೆ ಮನವಿ ಸಲ್ಲಿಸಲಿದ್ದೇವೆ.

- Advertisement -

ಈ ಖಂಡನಾ ಸಭೆಗೆ ತಾವೆಲ್ಲರೂ ಆಗಮಿಸ ಬೇಕಾಗಿ ದ.ಕ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಕಲ್ಲೇಗ ತಿಳಿಸಿದ್ದಾರೆ.



Join Whatsapp