9ನೇ ತರಗತಿಯ ವಿದ್ಯಾರ್ಥಿ ಆತ್ಮಹತ್ಯೆ: ಕಾರಣವೇನು ಗೊತ್ತಾ ?

Prasthutha|

ಮಧ್ಯಪ್ರದೇಶ: ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ 9ನೇ ತರಗತಿಯ ವಿದ್ಯಾರ್ಥಿಯೋರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆದರೆ ವಿದ್ಯಾರ್ಥಿ ಆತ್ಮಹತ್ಯೆಯ ಕಾರಣ ಕೇಳಿದ ಎಲ್ಲರೂ ಒಂದು ಕ್ಷಣ ಶಾಕ್ ಆಗಿದ್ದಾರೆ.

- Advertisement -

ಬೇತುಲ್ ಜಿಲ್ಲೆಯ ಆಮೋದ್ ಗ್ರಾಮದಲ್ಲಿ 14 ವರ್ಷದ, ಖಾಸಗಿ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಯೋರ್ವ ಶಾಲಾ ಬಸ್ ಹತ್ತಲು ಮನೆಯಿಂದ ಬೆಳಗ್ಗೆ ಹೊರಟಿದ್ದ. ಆದರೆ ವಿದ್ಯಾರ್ಥಿ ತಲುಪುವಷ್ಟರಲ್ಲಿ ಶಾಲಾ ಬಸ್ ಮಿಸ್ ಆಗಿತ್ತು. ಬಸ್ ಹೋದ ಬೇಸರದಲ್ಲೇ ಅಳುತ್ತಲೇ ಮನೆ ಕಡೆ ಹೆಜ್ಜೆ ಹಾಕಿದ ವಿದ್ಯಾರ್ಥಿ ಮನೆಯ ಹಿಂಬದಿಯ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಅತ್ಯಂತ ಚುರುಕಾಗಿದ್ದ ವಿದ್ಯಾರ್ಥಿ, ಒಂದು ದಿನವೂ ತರಗತಿಯನ್ನು ತಪ್ಪಿಸಿಕೊಂಡಿರಲಿಲ್ಲ. ಆದರೆ ಸೋಮವಾರ ಶಾಲಾ ಬಸ್ ಮಿಸ್ ಆದ ಕಾರಣ ಬೇಸರದಿಂದ ಶಾಲಾ ಸಮವಸ್ತ್ರದಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಗೋಧಾಡೋಂಗ್ರಿ ಪೊಲೀಸ್ ಠಾಣಾಧಿಕಾರಿ ರವಿ ಶಕ್ಯ ಹೇಳಿದ್ದಾರೆ.

Join Whatsapp