9 ವರ್ಷದ ವಿದ್ಯಾರ್ಥಿನಿ  ಅನುಮಾನಾಸ್ಪದ  ಸಾವು; ಶಿಕ್ಷಣ ಸಂಸ್ಥೆ ವಿರುದ್ಧ ದೂರು ದಾಖಲು

Prasthutha|

ಬೆಂಗಳೂರು: ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ರಾಮಚಂದ್ರಾಪುರದಲ್ಲಿ ನಡೆದಿದೆ.

- Advertisement -

ಗಂಗಮ್ಮನಗುಡಿಯ ರಾಮಚಂದ್ರಾಪುರದ ಆರ್ಡಿ ಇಂಟರ್ನ್ಯಾಷನಲ್ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಿಕ್ಷಕಿ ಶಿಕ್ಷಿಸಿದ್ದರಿಂದ ಬಾಲಕಿ ಸಾವನ್ನಪ್ಪಿರುವುದಾಗಿ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಆರ್ಡಿ ಇಂಟರ್ನ್ಯಾಷನಲ್ ಶಾಲೆ ವಿರುದ್ಧ ದೂರು ದಾಖಲಾಗಿದೆ.

ನಿಶಿತಾ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಮಧ್ಯಾಹ್ನ 1.30 ರ ಸುಮಾರಿಗೆ ಏಕಾಏಕಿ ತರಗತಿಯಲ್ಲೇ ಕುಸಿದು ಬಿದ್ದಿದ್ದಳು. ಕೂಡಲೇ  ಶಾಲೆಯ ಶಿಕ್ಷಕರು ನಿಶಿತಾಳನ್ನು ಆಸ್ಪತ್ರೆಗೆ ಕರೆದೊಯ್ದರು. ನಿಶಿತಾಳನ್ನು ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

- Advertisement -

ನಿಶಿತಾ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪೋಷಕರಾದ ನಾಗೇಂದ್ರ-ಸರಸ್ವತಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಗುವಿನ  ಸಾವಿನ ಅರ್ಧ ಗಂಟೆ ಮೊದಲು ನಾನು ಸ್ಕೂಲ್ ಗೆ ಹೋಗಿದ್ದಾಗ ಆಕೆ ಚೆನ್ನಾಗಿದ್ದಳು. ಆದರೆ, ಅರ್ಧ ಗಂಟೆಯ ಬಳಿಕ ಶಾಲೆಯಿಂದ ಫೋನ್ ಮಾಡಿ ಕರೆದಿದ್ದಾರೆ. ಹೋಗಿ ನೋಡಿದಾಗ ಮಗು ಮಾತಾಡಿಲ್ಲ. ಅಸ್ಪತ್ರೆಗೆ ಕರೆದುಕೊಂಡು ಹೋದರೆ ಸಾವಾಗಿದೆ ಅಂದ್ರು. ಮಕ್ಕಳು ಹೇಳೋ ಪ್ರಕಾರ ಟೀಚರ್ ಹೊಡೆದಿದ್ದಾರೆ ಎಂದು ಮೃತ ವಿದ್ಯಾರ್ಥಿನಿ ನಿಶ್ಚಿತಾ ಅಜ್ಜಿ ಹೇಳಿಕೆ ನೀಡಿದ್ದಾರೆ.

ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಮುಂದಿನ ತನಿಖೆ ಕೈಗೊಳ್ಳುತ್ತೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Join Whatsapp