ಊಟ ಕೇಳಿದ್ದಕ್ಕೆ 83 ವರ್ಷದ ವೃದ್ಧೆ ತಾಯಿಯ ತಲೆಗೆ ಹೊಡೆದ ಮಗ!

Prasthutha|

►ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ವೃದ್ಧ ತಾಯಿ

- Advertisement -

ಕಾರ್ಕಳ: ಮಗನೊಂದಿಗೆ ಊಟ ಕೇಳಿದ್ದಕ್ಕಾಗಿ 83 ವರ್ಷದ ವೃದ್ಧ ತಾಯಿಯ ತಲೆಗೆ ಹೊಡೆದು ಗಾಯಗೊಳಿಸಿ ಚಿತ್ರಹಿಂಸೆ ನೀಡಿರುವ ಘಟನೆ ಕಲ್ಯಾ ಗ್ರಾಮದ ಅಶೋಕನಗರದಲ್ಲಿ ನಡೆದಿದೆ.

ದಿವಂಗತ ಶ್ರೀಧರ ಆಚಾರ್ಯರವರ ಪತ್ನಿ ಶ್ರೀಮತಿ ಯಶೋದ ಅವರು ತನ್ನ ಮಗನಿಂದ ಹಲ್ಲೆಗೊಳಗಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಲ್ಲೆ ಮಾಡಿದ ಮಗ ದಾಮೋದರ ಆಚಾರಿಯ ವಿರುದ್ಧ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

ದಾಮೋದರ ಆಚಾರಿಯು ತನ್ನ ತಾಯಿ ಕೆಲಸ ಮಾಡುವುದಿಲ್ಲ ಎಂಬ ಕಾರಣಕ್ಕೆ ಪ್ರತಿ ದಿನ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡುತ್ತಿದ್ದ ಎನ್ನಲಾಗಿದ್ದು, ತಾಯಿಯು ಊಟ ಕೇಳಿದ್ದರಿಂದ ಕೋಪಗೊಂಡ ದಾಮೋದರ ಆಚಾರಿ ತೆಂಗಿನ ಮರದ ಹೆಡೆಯಿಂದ ತಾಯಿ ತಲೆಯ ಹಿಂಬಾಗಕ್ಕೆ ಹೊಡೆದು ಗಾಯಗೊಳಿಸಿದ್ದಾನೆ.

Join Whatsapp