ಮಾಜಿ ಸಚಿವೆ ಡಾ.ಬಿ.ಟಿ.ಲಲಿತಾ ನಾಯಕ್ ಗೆ 5ನೇ ಕೊಲೆ ಬೆದರಿಕೆ ಪತ್ರ

Prasthutha|

ಬೆಂಗಳೂರು: ಮಾಜಿ ಸಚಿವೆ, ಸಾಹಿತಿ ಡಾ.ಬಿ.ಟಿ.ಲಲಿತಾನಾಯಕ್’ರನ್ನು ಹತ್ಯೆ ಮಾಡುವುದಾಗಿ ಮತ್ತೊಂದು ಕೊಲೆ ಬೆದರಿಕೆ ಪತ್ರ ಬಂದಿದೆ. ಇದು  5 ನೇ ಕೊಲೆ ಬೆದರಿಕೆ ಪತ್ರವಾಗಿದೆ. ಈ ಹಿಂದೆ ನಾಲ್ಕು ಪತ್ರಗಳು ಬಂದಿದ್ದವು. ಆದರೆ ಇದುವರೆಗೆ ಯಾರನ್ನೂ ಬಂಧಿಸಿರಲಿಲ್ಲ.

- Advertisement -

ನವೆಂಬರ್ 30ರಂದು  ಮಂಡ್ಯ ಜಿಲ್ಲೆಯಿಂದ 5 ನೇ ಕೊಲೆ ಬೆದರಿಕೆ ಪತ್ರವನ್ನು ಕಳುಹಿಸಲಾಗಿದೆ. ಈ ಹಿಂದೆ ಹಲವಾರು ರಾಜಕೀಯ ನಾಯಕರು ಹಾಗೂ ಸಾಹಿತಿಗಳನ್ನು ಕೊಲೆ ಮಾಡುವುದಾಗಿ ತಿಳಿಸಿದ ವ್ಯಕ್ತಿ ಈಗ ನಿವೃತ್ತ ನ್ಯಾಯಮೂರ್ತಿಗಳಾದ ಎಚ್ ಎನ್ ನಾಗಮೋಹನ್ ದಾಸ್ ಸೇರಿದಂತೆ ನಿಮ್ಮ 61 ಜನ ಸಾಹಿತಿಗಳ ಕೊಲೆ ಮಾಡುವುದಾಗಿ ತಿಳಿಸಿ 5 ನೇ ಪತ್ರವನ್ನು ನಾಯಕ್ ಅವರಿಗೆ ಕಳುಹಿಸಿದ್ದಾನೆ ಎಂದು ತಿಳಿದುಬಂದಿದೆ.

 ಈ ಸಂಬಂಧ ಸಂಜಯ ನಗರ ಪೋಲೀಸ್ ಠಾಣೆಗೆ ದೂರು ನೀಡಲಾಗಿದೆ.

Join Whatsapp