ಪ್ರಧಾನಿ ಮೋದಿ ದೆಹಲಿ ತಲುಪುವ ಮುನ್ನ ಕಿತ್ತುಹೋದ ರಸ್ತೆ: ಗುತ್ತಿಗೆದಾರನಿಗೆ 3 ಲಕ್ಷ ರೂ. ದಂಡ

Prasthutha|

ಬೆಂಗಳೂರು: ಪ್ರಧಾನಿ ಮೋದಿ ಅವರ ಇತ್ತೀಚಿಗಿನ ಬೆಂಗಳೂರು ಭೇಟಿಯ ಹಿನ್ನೆಲೆಯಲ್ಲಿ ರಸ್ತೆಗೆ ಹಾಕಲಾಗಿದ್ದ ಡಾಮರ್ ಅವರು ದೆಹಲಿ ತಲುಪುವ ಮುನ್ನ ಕಿತ್ತುಹೋಗಿದ್ದು, ಕಳಪೆ ಕಾಮಗಾರಿ ನಡೆಸಿದ ಬಿಬಿಎಂಪಿ ಇಂಜಿನಿಯರ್ ವಿರುದ್ಧ ಶೋಕಾಸ್ ನೋಟಿಸ್ ನೀಡಿದೆ. ಅಲ್ಲದೆ ಗುತ್ತಿಗೆದಾರ ರಮೇಶ್ ಎಂಬವರಿಗೆ ಸುಮಾರು 3 ಲಕ್ಷ ರೂ. ದಂಡ ವಿಧಿಸಿದೆ ಎಂದು ತಿಳಿದು ಬಂದಿದೆ.

- Advertisement -

ಪ್ರಧಾನಿ ಮೋದಿ ಅವರು ನಾಗರಭಾವಿಯಲ್ಲಿರುವ ಡಾ. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್’ನಲ್ಲಿ ನೂತನ ಕಟ್ಟಡ ಉದ್ಘಾಟನೆ ನಡೆಸಲು ಆಗಮಿಸಿದ ಕಾರಣ ರಸ್ತೆ ದುರಸ್ತಿ ಮಾಡಲಾಗಿತ್ತು. ಸದ್ಯ ಈ ರಸ್ತೆಗಳು ಸಂಪೂರ್ಣವಾಗಿ ಕಿತ್ತು ಹೋಗಿದೆ. ಅಲ್ಲದೆ ಎಚ್.ಎಂ.ಟಿ ಲೇಔಟ್’ನಲ್ಲಿ ದುರಸ್ತಿ ಮಾಡಿದ ರಸ್ತೆಗೆ ಹಾನಿಯಾಗಿದ್ದು, ಮರಿಯಪ್ಪನಪಾಳ್ಯದಲ್ಲಿ ವಾರದೊಳಗೆ ಗುಂಡಿಯಾಗಿರುವುದು ಸುದ್ದಿಯಾದ ಹಿನ್ನೆಲೆಯಲ್ಲಿ ಬಿಬಿಎಂಪಿ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ಅಲ್ಲದೆ ಇದರ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಬಿಎಂಪಿಗೆ ಸೂಚಿಸಿದ್ದರು.

Join Whatsapp