ಚಿಕ್ಕಮಗಳೂರಿನಲ್ಲಿ 3 ಮನೆಗಳು ಬೆಂಕಿಗಾಹುತಿ: ಮಹಿಳೆಯರ ದಿಟ್ಟತನದಿಂದ ಉಳಿಯಿತು ಇಬ್ಬರ ಪ್ರಾಣ

Prasthutha|

ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಗುಮ್ಮನಹಳ್ಳಿ ಸಮೀಪದ ಭೋವಿ ಕಾಲೋನಿಯಲ್ಲಿ ಆಕಸ್ಮಿಕವಾಗಿ 3 ಮನೆಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಸುಟ್ಟು ಹೋಗಿವೆ. ಆದರೆ ಬೆಂಕಿ ಹೊತ್ತಿ ಉರಿಯುವಾಗಲೇ ಮಹಿಳೆಯರು ಒಳ ಹೋಗಿ ಇಬ್ಬರನ್ನು ರಕ್ಷಿಸಿದ್ದಾರೆ.

- Advertisement -

ಘಟನೆ ನಡೆದಾಗ ಊರಿನಲ್ಲಿ ಗಂಡಸರ್ಯಾರೂ ಇರಲಿಲ್ಲ. ಗ್ರಾಮದಲ್ಲಿ ಸಾವನ್ನಪ್ಪಿದ್ದ ಒಬ್ಬರ ಅಂತ್ಯ ಸಂಸ್ಕಾರಕ್ಕೆ ಹೋಗಿದ್ದರು. ಆ ಸಂದರ್ಭದಲ್ಲಿ ಮಹಿಳೆಯರು ದಿಟ್ಟತನ ತೋರಿಸಿ ಇಬ್ಬರ ಪ್ರಾಣವುಳಿಸಿದ್ದಾರೆ.

ಶಶಿ, ಕಲ್ಲೇಶ್, ಹನುಮಂತ ಎಂಬುವರಿಗೆ ಸೇರಿದ್ದ ಮನೆಯು ಬೆಂಕಿಗಾಹುತಿಯಾಗಿವೆ. ಕಲ್ಲೇಶ್ ಮನೆಯಲ್ಲಿ 6 ವರ್ಷದ ಮಗು ಮಲಗಿತ್ತು. ಅಲ್ಲದೆ ಹನುಮಂತ ಎಂಬುವವರು ಮದ್ಯ ಸೇವಿಸಿ ಮನೆಯಲ್ಲಿ ಮಲಗಿದ್ದರು. ಇವರಿಬ್ಬರನ್ನು ಮಹಿಳೆಯರು ರಕ್ಷಿಸಿದ್ದಾರೆ.

Join Whatsapp