ಜ.11 ರಂದು 28 ಸಚಿವರು ದೆಹಲಿಗೆ ಬನ್ನಿ: ಕಾಂಗ್ರೆಸ್ ಹೈಕಮಾಂಡ್ ಬುಲಾವ್

Prasthutha|

ಬೆಂಗಳೂರು: ರಾಜ್ಯದ 28 ಕ್ಷೇತ್ರಗಳಿಗೆ ಸಂಯೋಜಕರಾಗಿ ನೇಮಕ ಮಾಡಿರುವ 28 ಸಚಿವರನ್ನು ಕಾಂಗ್ರೆಸ್ ಹೈಕಮಾಂಡ್ ದೆಹಲಿಗೆ ಬರಲು ಸೂಚಿಸಿದೆ. ಜನವರಿ 11 ರಂದು ಲೋಕಸಭಾ ಚುನಾವಣೆಗೆ ಸಿದ್ಧತೆ ಕುರಿತಂತೆ ಮಹತ್ವದ ಸಭೆ ನಡೆಯಲಿರುವ ಕಾರಣ ರಾಜ್ಯದ 28 ಸಚಿರಿಗೆ ಬುಲಾವ್ ನೀಡಲಾಗಿದೆ.

- Advertisement -

ಜನವರಿ 11 ರಂದು ಮಧ್ಯಾಹ್ನ ನಂತರ ಮಹತ್ವದ ಸಭೆ ನಡೆಯಲಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ 28 ಕ್ಷೇತ್ರಗಳಿಗೂ ಸಂಯೋಜಕ ಅಂದರೆ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದ್ದು, ದೆಹಲಿಗೆ ಬರುವಂತೆ ಸೂಚಿಸಲಾಗಿದೆ.

Join Whatsapp