ಗೋಮಾಂಸ ಸೇವನೆ| ಬುಡಕಟ್ಟು ಜನಾಂಗದ 24 ಯುವಕರಿಗೆ ಸಾಮಾಜಿಕ ಬಹಿಷ್ಕಾರ!

Prasthutha|

ತಿರುವನಂತಪುರ: ಗೋಮಾಂಸ ಸೇವಿಸಿದ 24 ಬುಡಕಟ್ಟು ಜನಾಂಗದ ಯವಕರಿಗೆ ಸಾಮಾಜಿಕ ಬಹಿಷ್ಕಾರ ಹೇರಿದ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನಡೆದಿದೆ.

- Advertisement -

ಗೋಮಾಂಸ ಸೇವನೆ ತಮ್ಮ ಸಂಪ್ರದಾಯಕ್ಕೆ ವಿರುದ್ಧವಾಗಿದೆ. ಈ ಮೂಲಕ ಶತಮಾನದ ತಮ್ಮ ಪದ್ಧತಿ, ಸಂಪ್ರದಾಯಗಳನ್ನು ಉಲ್ಲಂಘಿಸಿದ್ದಾರೆ ಎಂದು ಬುಡಕಟ್ಟು ಜನಾಂಗದ ಪುರುಷರಿಗೆ ಆ ಜನಾಂಗದ ಉರುಕ್ಕೂಟಮ್‌ (ಬುಡಕಟ್ಟು ಜನಾಂಗದ ಪರಿಷತ್ತು) ಸಾಮಾಜಿಕ ಬಹಿಷ್ಕಾರ ಹೇರಿದೆ.


ಬಹಿಷ್ಕಾರಗೊಂಡ ಪುರುಷರು ಅರಣ್ಯದ ನಿರ್ಜನ ಪ್ರದೇಶಕ್ಕೆ ತೆರಳಬೇಕು. ಅವರ ಪತ್ನಿ, ಸಂಬಂಧಿಗಳು, ಮಕ್ಕಳು, ತಂದೆ–ತಾಯಿ ಸೇರಿ ಯಾರೂ ಅವರನ್ನು ಸಂ‍ಪರ್ಕಿಸಬಾರದು ಎಂದು ಉರುಕ್ಕೂಟಮ್ ಆದೇಶಿಸಿದೆ.

- Advertisement -


ಈ ಕುರಿತು ಯಾವುದೇ ದೂರು ಬಂದಿಲ್ಲ. ಆದರೆ ವಿವಿಧ ಕಡೆಗಳಿಂದ ದೊರೆತ ಮಾಹಿತಿಯನ್ನು ಆಧರಿಸಿ ತನಿಖೆ ಆರಂಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

.

Join Whatsapp