2022ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟ; ಅಮೈ ಮಹಾಲಿಂಗ, ಅಬ್ದುಲ್ ಖಾದರ್, ಸಿದ್ದಲಿಂಗಯ್ಯ (ಮರಣೋತ್ತರ) ಸೇರಿ ಐವರು ಕನ್ನಡಿಗರಿಗೆ ಗೌರವ

Prasthutha|

ನವದೆಹಲಿ; ಗಣರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ವರ್ಷಂಪ್ರತಿ ನೀಡಲಾಗುವ ಪದ್ಮ ವಿಭೂಷಣ, ಪದ್ಮಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿದೆ

- Advertisement -

2022ರ ಸಾಲಿನಲ್ಲಿ ನಾಲ್ವರು ಸಾಧಕರಿಗೆ ಪದ್ಮ ವಿಭೂಷಣ, 17 ಸಾಧಕರಿಗೆ ಪದ್ಮಭೂಷಣ ಹಾಗೂ 107 ವಿವಿಧ ಕ್ಷೇತ್ರದ ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಐವರು ಕನ್ನಡಿಗರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪದ್ಮವಿಭೂಷಣ, ಪದ್ಮಭೂಷಣ ಹಾಗೂ ಪದ್ಮಶ್ರೀ ಪುರಸ್ಕೃತರ ಪಟ್ಟಿ ಈ ಕೆಳಗಿನಂತಿದೆ

- Advertisement -

ಕರ್ನಾಟಕ ಐವರಿಗೆ ಪದ್ಮಶ್ರೀ ಪ್ರಶಸ್ತಿ

ಸಿದ್ದಲಿಂಗಯ್ಯ (ಮರಣೋತ್ತರ) – ಸಾಹಿತ್ಯ ಮತ್ತು ಶಿಕ್ಷಣ

ಅಮೈ ಮಹಾಲಿಂಗ ನಾಯಕ್ – ಕೃಷಿ.

ಸುಬ್ಬಣ್ಣ ಅಯ್ಯಪ್ಪನ್ – ವಿಜ್ಞಾನ ಮತ್ತು ಎಂಜಿನಿಯರಿಂಗ್.

ಎಚ್ ಆರ್ ಕೇಶವಮೂರ್ತಿ – ಕಲೆ.

ಅಬ್ದುಲ್ ಖಾದರ್ ನಡಕಟ್ಟಿನ್ – ತಳಮಟ್ಟದ ನಾವಿನ್ಯತೆ.

Join Whatsapp