ಗಂಗಾಜಲ ಸಿಂಪಡಿಸಿ ಶುದ್ದಿಗೊಂಡು ಬಿಜೆಪಿ ಪಕ್ಷದಿಂದ ಹೊರಬಂದ 200 ಕಾರ್ಯಕರ್ತರು

Prasthutha|

ಕೋಲ್ಕತಾ : ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮವೊಂದರಲ್ಲಿ ಬಿಜೆಪಿಯ ಸುಮಾರು 200 ಕಾರ್ಯಕರ್ತರು ಗಂಗಾ ಜಲದಿಂದ ಶುದ್ಧೀಕರಣಗೊಂಡು ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಮರು ಸೇರ್ಪಡೆಗೊಂಡಿದ್ದಾರೆ.

- Advertisement -

ನಾವು  ಬಿಜೆಪಿಗೆ ಸೇರಿರುವುದು ದೊಡ್ಡ ಪ್ರಮಾದ ಎಂದು ಕಾರ್ಯಕರ್ತರು ಹೇಳಿದ್ದಾರೆ. ಅವರು ತಮ್ಮ ತಲೆ ಬೋಳಿಸಿಕೊಂಡಿದ್ದಾರೆ ಹಾಗೂ ತಮ್ಮ ತಪ್ಪಿನ ಪ್ರಾಯಶ್ಚಿತ ಸಲುವಾಗಿ ಗಂಗಾ ಜಲವನ್ನು ಸಿಂಪಡಣೆ ಮಾಡಿ ಶುದ್ದೀಕರಣಗೊಂಡ ಬಳಿಕ ಟಿಎಂಸಿಗೆ ಮರು ಸೇರ್ಪಡೆಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹೂಗ್ಲಿಯಲ್ಲಿ ಟಿಎಂಸಿ ಸೇರಿದ ಕಾರ್ಯಕರ್ತರು ಟಿಎಂಸಿ ಪತಾಕೆಯನ್ನು ಎತ್ತಿ ಹಿಡಿದರು ಹಾಗೂ ಆರಂಭಾಗ್ ಟಿಎಂಸಿ ಸಂಸದೆ ಅಪರೂಪ ಪೊದ್ದಾರ್ ಅವರೊಂದಿಗೆ ಕೈಜೋಡಿಸಿ ಒಗ್ಗಟ್ಟು ಪ್ರದರ್ಶಿಸಿದರು. 

Join Whatsapp