ಸಿವಿಲ್ ನ್ಯಾಯಾಧೀಶೆಯಾಗಿ ಮಂಗಳೂರಿನ ಅಸ್ರೀನಾ ಪ್ರಮಾಣ ವಚನ ಸ್ವೀಕಾರ

Prasthutha|

ಮಂಗಳೂರು : ಸಿವಿಲ್ ನ್ಯಾಯಾಧೀಶೆಯಾಗಿ ಮಂಗಳೂರು ಮೂಲದ ಅಸ್ರೀನಾ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರಿಂದ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

- Advertisement -

ಹಳೆಯಂಗಡಿಯ ಅಕ್ಬರ್ ಅಲಿ ಮತ್ತು ಅಸ್ಮತ್ ದಂಪತಿಯ ಪುತ್ರಿಯಾದ ಅಸ್ರೀನಾ ಪ್ರಸ್ತುತ ಕೃಷ್ಣಾಪುರದ ಚೊಕ್ಕಬೆಟ್ಟುವಿನ ನಿವಾಸಿಯಾಗಿದ್ದಾರೆ. ಅಸ್ರೀನಾರ ತಂದೆ ಅಕ್ಬರ್ ಅಲಿ ಎಂಆರ್ ಪಿಎಲ್ ನಲ್ಲಿ ಉದ್ಯೋಗಿಯಾಗಿದ್ದು, ತಾಯಿ ಗೃಹಿಣಿಯಾಗಿದ್ದಾರೆ.

ಹಳೆಯಂಗಡಿಯಲ್ಲಿ ಪ್ರಾಥಮಿಕ ಮತ್ತು ಕಿನ್ನಿಗೋಳಿಯಲ್ಲಿ ಪ್ರೌಢ ಶಿಕ್ಷಣ ಪೂರೈಸಿರುವ ಅಸ್ರೀನಾ, ಮಂಗಳೂರಿನ ಎಸ್ ಡಿಎಂ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದಾರೆ. ನಗರದ ಹಿರಿಯ ವಕೀಲರಾದ ಮಯೂರಕೀರ್ತಿ, ಶರತ್ ಕುಮಾರ್ ಬಿ. ಅವರ ಬಳಿ ತಮ್ಮ ವಕೀಲ ವೃತ್ತಿಜೀವನ ಆರಂಭಿಸಿದ್ದ ಅಸ್ರೀನಾ, ನಂತರ 2019ರಲ್ಲಿ ನ್ಯಾಯಾಧೀಶ ಹುದ್ದೆಗೆ ನಡೆದ ಪರೀಕ್ಷೆಗೆ ಹಾಜರಾಗಿ, ತೇರ್ಗಡೆ ಹೊಂದಿದ್ದಾರೆ.

Join Whatsapp