ವಿದ್ಯುತ್ ತಗುಲಿದ ಅಣ್ಣನ ರಕ್ಷಣೆಗೆ ಧಾವಿಸಿದ ತಮ್ಮ: ಸಹೋದರರಿಬ್ಬರೂ ಸಾವು

Prasthutha|

ವಿಜಯಪುರ: ತೋಟದ ಬಾವಿ ಬಳಿ ವಿದ್ಯುತ್ ತಗುಲಿ ಸಂಭವಿಸಿದ ದುರಂತವೊಂದರಲ್ಲಿ ಅಣ್ಣ-ತಮ್ಮ ಇಬ್ಬರೂ ಸಾವಿಗೀಡಾದ ದಾರುಣ ಘಟನೆ ಇಂಡಿ ತಾಲೂಕಿನ ಭತಗುಣಕಿ ಗ್ರಾಮದಲ್ಲಿ ಸಂಭವಿಸಿದೆ. ಇಂಡಿ ತಾಲೂಕಿನ ಭತಗುಣಕಿಯ ಮುದ್ದುಗೌಡ ಅಪ್ಪಾಸಾಹೇಬ್ ಪಾಟೀಲ್ (20) ಹಾಗೂ ಶಿವರಾಜ್ ಅಪ್ಪಾಸಾಹೇಬ್ ಪಾಟೀಲ್ (18) ಮೃತಪಟ್ಟ ಸಹೋದರರು.

- Advertisement -


ಗ್ರಾಮದ ತೋಟದ ಬಾವಿಯ ಬಳಿಗೆ ಹೋಗಿದ್ದ ಸಹೋದರರ ಪೈಕಿ ಮುದ್ದುಗೌಡ ಮೋಟಾರ್ ಆನ್ ಮಾಡಿದಾಗ ವಿದ್ಯುತ್ ಶಾಕ್ ತಗುಲಿದೆ. ತಕ್ಷಣ ಅಣ್ಣ ಜೀವ ರಕ್ಷಣೆಗೆ ಧಾವಿಸಿದ ತಮ್ಮ ಶಿವರಾಜ್​, ಅಣ್ಣನನ್ನು ರಕ್ಷಿಸಲು ಮುಂದಾಗಿದ್ದಾನೆ. ಆದರೆ ದುರದೃಷ್ಟವಶಾತ್ ಇಬ್ಬರಿಗೂ ವಿದ್ಯುತ್ ಶಾಕ್ ತಗುಲಿ ಸಾವಿಗೀಡಾಗಿದ್ದಾರೆ.
ಝಳಕಿ ಪೊಲೀಸರು ಸ್ಥಳಕ್ಕೆ ಧಾವಿಸಿ, ಪ್ರಕರಣದ ದಾಖಲಿಸಿ ಮುಂದಿನ ತನಿಖೆಯನ್ನು ‌ಕೈಗೊಂಡಿದ್ದಾರೆ.

Join Whatsapp