ಮಹಿಳೆಗೆ ಕಿರುಕುಳ ಆರೋಪ: ಯುವಕನಿಗೆ ಥಳಿತ, ಬೆತ್ತಲೆ ಮೆರವಣಿಗೆ

Prasthutha|

ಮಹಿಳೆಯರೊಬ್ಬರಿಗೆ ಕಿರುಕುಳ ನೀಡಿದ ಆರೋಪದಲ್ಲಿ 28ರ ಹರೆಯದ ಯುವಕನೋರ್ವನಿಗೆ ಥಳಿಸಿ ಬೆತ್ತಲೆ ಮರವಣಿಗೆ ಮಾಡಿದ ಘಟನೆ ರಾಜಸ್ಥಾನದ ಝಲವಾರ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪಿಟಿಐ ವರದಿ ಮಾಡಿದೆ. ಆರೋಪಿಗಳು ಘಟನೆಯನ್ನು ಚಿತ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊವನ್ನು ಹಂಚಿದ್ದಾರೆ.

- Advertisement -

ನಗರದ ಬಘೇರ್ ಗ್ರಾಮದಲ್ಲಿ ಘಟನೆ ನಡೆದಿದೆ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮೇಲ್ವಿಚಾರಕ ರಾಕೇಶ್ ರಾಥೋರ್ ಎಂಬಾತ ಶನಿವಾರದಂದು ಅದೇ ಉದ್ಯೋಗ ಯೋಜನೆಯಡಿ ಕೆಲಸ ಮಾಡುವ ಮಹಿಳೆಯೋರ್ವರ ಮನೆಗೆ ಪ್ರವೇಶಿಸಿದ್ದ ಎನ್ನಲಾಗಿದೆ.

ಆಗ ಆತನನ್ನು ಹಿಡಿದ ಆಕೆಯ ಪತಿ ಎಚ್ಚರಿಕೆ ಕೊಟ್ಟು ಬಿಟ್ಟಿದ್ದ. ಆದರೆ ಒಂದು ದಿನದ ನಂತರ ಆತನ ಕೆಲವು ಸ್ನೇಹಿತರು ರಾಥೋರ್ ಗೆ ಚಪ್ಪಲಿ ಹಾರ ಹಾಕಿ ನಗ್ನ ಮೆರವಣಿಗೆ ಮಾಡಿದ್ದಾರೆ.

Join Whatsapp