ಬ್ರಾಹ್ಮಣ್ಯದ ವಿರುದ್ಧ ಹೇಳಿಕೆ: ನಟ ಚೇತನ್ ಗೆ ಬಸವನಗುಡಿ ಪೊಲೀಸ್ ಠಾಣೆಯಿಂದ ನೋಟಿಸ್

Prasthutha|

ಬೆಂಗಳೂರು: ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಪೆರಿಯಾರ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಕನ್ನಡ ಚಿತ್ರ ನಟ ಚೇತನ್ ವಿರುದ್ಧ ವಿಪ್ರ ಯುವ ವೇದಿಕೆ ನೀಡಿದ ದೂರಿಗೆ ಸಂಬಂಧಿಸಿ ಬೆಂಗಳೂರಿನ ಬಸವನಗುಡಿ ಪೊಲೀಸರು ಚೇತನ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.
ಬುಧವಾರ ಬೆಳಗ್ಗೆ ಚೇತನ್ ಠಾಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.

- Advertisement -


ವಿಪ್ರ ಯುವ ವೇದಿಕೆ ಅಧ್ಯಕ್ಷ ಪವನ್ ಕುಮಾರ್ ಶರ್ಮಾ ಅವರು ಜೂನ್ 10ರಂದು ಚೇತನ್ ವಿರುದ್ಧ ಠಾಣೆಗೆ ದೂರು ನೀಡಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಬ್ರಾಹ್ಮಣ, ಬ್ರಾಹ್ಮಣ್ಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು. ಪೊಲೀಸರು ಐಪಿಸಿ ಕಲಂ 153ಬಿ, 295ಎ ಯಡಿ ಪ್ರಕರಣ ದಾಖಲಿಸಿದ್ದರು.


ಚೇತನ್ ಅವರು ಅಪ್ ಲೋಡ್ ಮಾಡಿರುವ ಫೇಸ್ ಬುಕ್, ಯೂಟ್ಯೂಬ್ ಗಳ ಲಿಂಕ್ ಗಳಲ್ಲಿರುವ ವೀಡಿಯೋಗಳನ್ನು ಪರಿಶೀಲಿಸಿ ಅವುಗಳನ್ನು ಯಾವ ಐಡಿಗಳಿಂದ ಅಪ್ ಲೋಡ್ ಮಾಡಲಾಗಿದೆ. ಅಪ್ ಲೋಡ್ ಮಾಡಿರುವವರ ಮಾಹಿತಿ ನೀಡಿ ತನಿಖೆಗೆ ಸಹಕರಿಸಿ ಎಂದು ನೋಟಿಸ್ ನಲ್ಲಿ ಬಸವನಗುಡಿ ಪೊಲೀಸರು ಕೋರಿದ್ದಾರೆ.

Join Whatsapp