ಪ್ರತಿಭಟನಾ ನಿರತ ರೈತರಿಗೆ ನೀರು ಪೂರೈಸಿದ ದೆಹಲಿ ಡಿಸಿಎಂ

Prasthutha|

- Advertisement -

ಹೊಸದಿಲ್ಲಿ : ಮುಷ್ಕರ ನಡೆಯುತ್ತಿರುವ ಗಾಝಿಪುರಕ್ಕೆ ದೆಹಲಿ ಸರಕಾರ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದೆ. ಕುಡಿಯುವ ನೀರು ಮತ್ತು ಶೌಚಾಲಯ ಸೇರಿದಂತೆ ಇತರ ಮೂಲಭೂತ ಸೌಲಭ್ಯಗಳನ್ನು ಪರಿಶೀಲಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.

ರೈತರ ಮುಷ್ಕರವನ್ನು ವಿಫಲಗೊಳಿಸುವ ಉದ್ದೇಶದಿಂದ ಉತ್ತರ ಪ್ರದೇಶ ಸರಕಾರ ಗಾಝಿಪುರದ ಪ್ರತಿಭಟನಾ ಸ್ಥಳಕ್ಕೆ ನೀರು ಮತ್ತು ವಿದ್ಯುತ್ ಸರಬರಾಜನ್ನು ಕಡಿತಗೊಳಿಸಿತ್ತು. ಇದರೊಂದಿಗೆ ದೆಹಲಿ ಸರಕಾರವು ಪ್ರತಿಭಟನಾ ಸ್ಥಳಕ್ಕೆ ನೀರು ಪೂರೈಕೆ ಮಾಡುವ ಮೂಲಕ ಬೆಂಬಲವನ್ನು ಘೋಷಿಸಿದೆ.

Join Whatsapp