ದೇಶದಲ್ಲಿ ಕಾನೂನು ಜಾರಿಯಲ್ಲಿದ್ದರೆ ಅರ್ನಾಬ್ ಗೆ ಜೈಲು ಖಚಿತ; ಪ್ರಶಾಂತ್ ಭೂಷಣ್

Prasthutha|

ದೇಶದಲ್ಲಿ ಕಾನೂನು ಎಂಬುದು ಜಾರಿಯಲ್ಲಿದ್ದರೆ,ಅರ್ನಾಬ್ ಗೋಸ್ವಾಮಿ ದೀರ್ಘಕಾಲ ಜೈಲು ವಾಸ ಅನುಭವಿಸುವುದು ಖಚಿತ ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಹೇಳಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿ, ರಿಪಬ್ಲಿಕ್ ಟಿವಿ ಕಾರ್ಯನಿರ್ವಾಹಕ ಸಂಪಾದಕ ಅರ್ನಾಬ್ ಗೋಸ್ವಾಮಿ ಹಾಗೂ ಬ್ರಾಡ್‌ ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ -ಬಾರ್ಕ್ನ ಮಾಜಿ ಸಿಇಓ ಪಾರ್ಥ್ ದಾಸ್ ಗುಪ್ತಾ ನಡುವೆ ನಡೆದಿರುವ ವಾಟ್ಸಾಪ್ ಚಾಟಿಂಗ್ ಸ್ಕ್ರೀನ್ ಶಾಟ್‌ ಗಳನ್ನು ಶುಕ್ರವಾರ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಈ ಚಾಟಿಂಗ್ ನಲ್ಲಿ ಅರ್ನಾಬ್ ಗೋಸ್ವಾಮಿ ಅಸಾಧಾರಣ ರೀತಿಯಲ್ಲಿ ಸರ್ಕಾರದಲ್ಲಿರುವ ದೊಡ್ಡವರನ್ನು ಭೇಟಿಮಾಡಲು ಹಲವು ರೀತಿಯ ಪಿತೂರಿಗಳನ್ನು ನಡೆಸಿದ್ದಾರೆ. ಮಾಧ್ಯಮದ ಮುಖ್ಯಸ್ಥರಾಗಿ ಅರ್ನಾಬ್ ಗೋಸ್ವಾಮಿ ತಮ್ಮ ಖ್ಯಾತಿಯನ್ನು ಪವರ್ ಬ್ರೋಕರ್ ಆಗಿ ಬಳಸಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಅಕ್ಟೋಬರ್‌ನಲ್ಲಿ ಬಾರ್ಕ್ ಪೊಲೀಸರಿಗೆ ದೂರು ನೀಡಿದ ನಂತರ ಟಿ ಆರ್‌ ಪಿ ರೇಟಿಂಗ್ ಹಗರಣ ಬೆಳಕಿಗೆ ಬಂದಿತ್ತು. ರಿಪಬ್ಲಿಕ್ ಟಿವಿ ತನ್ನ ಟಿ ಆರ್ ಪಿ ರೇಟಿಂಗ್ ಹೆಚ್ಚಿಸಿಕೊಳ್ಳಲು ವಂಚನೆಯ ಮಾರ್ಗ ಅನುಸರಿಸಿದೆ ಎಂದು ಬಾರ್ಕ್ ತನ್ನ ದೂರಿನಲ್ಲಿ ಆರೋಪಿಸಿದೆ.
ಪಾರ್ಥ್ ದಾಸ್ ಗುಪ್ತಾ ಅಧಿಕಾರ ದುರುಪಯೋಗದಲ್ಲಿ ಪಾಲ್ಗೊಂಡಿದ್ದರು. ರಿಪಬ್ಲಿಕ್ ಟಿವಿಯನ್ನು ನಂಬರ್ ಒನ್ ಸ್ಥಾನಕ್ಕೆ ತರಲು ಟಿ ಆರ್ ಪಿ ರೇಟಿಂಗ್ ಗಾಗಿ ರಿಗ್ಗಿಂಗ್ ನಲ್ಲಿ ಪಾಲ್ಗೊಂಡಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.

Join Whatsapp