ದೆಹಲಿ ಚಲೋ| ಗಲಭೆ ಆರೋಪ| ರೈತರ ವಿರುದ್ಧ ಎಫ್. ಐ. ಆರ್ ದಾಖಲು

Prasthutha|

‘ದೆಹಲಿ ಚಲೋ’ ಪ್ರತಿಭಟನೆಯಲ್ಲಿ ಭಾಗವಾಹಿಸಿದ್ದ ರೈತರ ವಿರುದ್ಧ ಕೊಲೆ ಯತ್ನ, ಸರಕಾರಿ ಕರ್ತವ್ಯಕ್ಕೆ ಅಡಚಣೆ, ಗಲಭೆ ಸೃಷ್ಟಿಸಿರುವುದು ಸೇರಿದಂತೆ ಹಲವು ಪ್ರಕರಣಗಳ ಅಡಿಯಲ್ಲಿ ಹರಿಯಾಣ ಸರಕಾರ ದೂರು ದಾಖಲಿಸಿದೆ ಎಂದು ವರದಿಯಾಗಿದೆ.

- Advertisement -

ನವೆಂಬರ್ 26ರಂದು, ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ಗುರುನಮ್ ಸಿಂಗ್ ಚಾರುಣಿ ಸೇರಿದಂತೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಹಲವು ರೈತ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಐಪಿಸಿ ಸೆಕ್ಷನ್ 147(ಗಲಭೆ ಪ್ರಚೋದನೆ), 149(ಕಾನೂನುಬಾಹಿರ ಸಭೆ), 186(ಸರಕಾರಿ ಕರ್ತವ್ಯಕ್ಕೆ ಅಡಚಣೆ), 269(ಕೋವಿಡ್-19 ಮಾರ್ಗಸೂಚಿ ಉಲ್ಲಂಘನೆ) ಮತ್ತು 307(ಕೊಲೆ ಯತ್ನ) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಹರಿಯಾಣ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ದೊರಕಿದೆ.

- Advertisement -

ಕೇಂದ್ರ ಸರಕಾರವು ತಂದಿರುವ ಕೃಷಿ ಕ್ಷೇತ್ರಕ್ಕೆ ಮಾರಕವಾಗಿರುವ ಕಾನೂನು ಹಿಂಪಡೆಯುವಂತೆ ಆಗ್ರಹಿಸಿ ರೈತ ಸಮುದಾಯವು ಹೋರಾಟದಲ್ಲಿ ನಿರತವಾಗಿದೆ.

Join Whatsapp