ಹೋಟೆಲ್ ನೌಕರನಿಗೆ ದುಷ್ಕರ್ಮಿಗಳಿಂದ ಹಲ್ಲೆ

Prasthutha|

ಹೋಟೆಲ್ ನೌಕರನಿಗೆ ದುಷ್ಕರ್ಮಿಗಳ ತಂಡವೊಂದು ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಸುದೇಮುಗೇರು ನಿವಾಸಿ ಮುಹಮ್ಮದ್ ಅಲ್ತಾಫ್ (21) ಹಲ್ಲೆಗೊಳಗಾದವರು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಉಜಿರೆಯ ಎಂಪೈರ್ ಹೋಟೆಲ್ ನಲ್ಲಿ ಜ್ಯೂಸ್ ಮೇಕರ್ ಆಗಿರುವ ಅಲ್ತಾಫ್ ಅವರನ್ನು ವಾರದ ಹಿಂದೆ ಹೋಟೆಲ್ ಗೆ ಬಂದ ಯುವಕರ ಗುಂಪೊಂದು ಗುರಾಯಿಸಿ ನೋಡಿದೆ. ಈ ಬಗ್ಗೆ ಅಲ್ತಾಫ್ ಪ್ರಶ್ನಿಸಿದಾಗ, ತಾಂಟ್ ರೇ ಬಾ ತಾಂಟ್’ ಎಂದು ಗುಂಪಿನಲ್ಲಿದ್ದ ಓರ್ವ ಹೇಳಿದ್ದ.
ಇದಾದ ಬಳಿಕ ಅಲ್ತಾಫ್ ಹೋಟೆಲ್ ನಿಂದ ಪಾರ್ಸೆಲ್ ಅನ್ನು ಮನೆಯೊಂದಕ್ಕೆ ತಲುಪಿಸಿ ಹಿಂದಿರುತ್ತಿದ್ದಾಗ 25ರಿಂದ 30 ಮಂದಿ ಇದ್ದ ತಂಡ ಅಲ್ತಾಫ್ ಮೇಲೆ ಹಲ್ಲೆ ನಡೆಸಿದೆ. ಜಗಳ ಬಿಡಿಸಲು ಬಂದ ಅಲ್ತಾಫ್ ಸಹೋದರ ಮುಹಮ್ಮದ್ ಅಶ್ರಫ್ ಗೂ ಹೆಲ್ಮೆಟ್ ನಿಂದ ಹಲ್ಲೆ ನಡೆಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Join Whatsapp