ಕ್ರೈಸ್ತ ಸಮುದಾಯದ ವಿರುದ್ಧ ಶೋಭಾ ಕರಂದ್ಲಾಜೆಯ ಕೋಮುವಾದಿ ಮತ್ತು ಅವಿವೇಕಿತನ ಹೇಳಿಕೆ ಖಂಡನೀಯ : SDPI

Prasthutha|

ಬೆಂಗಳೂರು : ಚರ್ಚ್ ಗಳಲ್ಲಿ ಕೋವಿಡ್ ಲಸಿಕೆ ಪಡೆಯಬಾರದೆಂದು ಪ್ರಚಾರ ಪಡಿಸಲಾಗುತ್ತಿದೆ ಎಂಬ ಕಪೋಲಕಲ್ಪಿತ ಹೇಳಿಕೆಯನ್ನು ನೀಡಿರುವ ಉಡುಪಿ ಸಂಸದೆ ಶೋಭಾ ಕರಂದ್ಲಾಜೆಯ ಕೋಮುವಾದಿ ನಡೆಯನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಜಾಹಿದ್ ಪಾಷಾ ಖಂಡಿಸಿದ್ದಾರೆ.

- Advertisement -

ಕೋವಿಡ್ ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಸಂಪೂರ್ಣ ಸೋತು ಹೋಗಿರುವ ಈ ಸರ್ಕಾರವು ರೋಗಿಗಳಿಗೆ ಬೆಡ್ ನಿಂದ ಹಿಡಿದು ಶವ ಸಂಸ್ಕಾರದ ವರೆಗಿನ ಸಮಸ್ಯೆಗಳನ್ನು ನಿಭಾಯಿಸಲು ವಿಫಲವಾಗಿದೆ, ಬಿಜೆಪಿ ಸರ್ಕಾರದ ವಿರುದ್ಧ ರೋಗಿಗಳು ಮತ್ತು ಕೋವಿಡ್ ಕಾರಣದಿಂದಾಗಿ ಹಲವು ವಿಧಗಳಿಂದ ಸಂತ್ರಸ್ತರಾದವರು ಪ್ರತಿನಿತ್ಯ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೆಲ್ಲಾ ಜನರ ಮನಸ್ಸಿನಿಂದ ಮರೆಮಾಚಲು ಕೋಮು ಪ್ರೇರಿತ ಹೇಳಿಕೆಯನ್ನು ನೀಡುತ್ತಾ ಜನರ ಮನಸ್ಸನ್ನು ದಿಕ್ಕುತಪ್ಪಿಸಲು ಮಾಡುವ ಸಂಘಪರಿವಾರ ಷಡ್ಯಂತ್ರದ ಮುಂದುವರಿದ  ಭಾಗವಾಗಿದೆ ಸಂಸದೆಯ ಈ ಹೇಳಿಕೆ ಎಂದು ಅವರು ಹೇಳಿದ್ದಾರೆ.

 ಶೋಭಾ ಕರಂದ್ಲಾಜೆ ಮೊದಲು ವ್ಯಾಕ್ಸಿನ್, ಆಕ್ಸಿಜನ್ ಮುಂತಾದ ಕೋವಿಡ್ ಸಂಬಂದಿತ ಉಪಕರಣಗಳನ್ನು ಕದ್ದು ಸಿಕ್ಕಿ ಬಿದ್ದಿರುವ ತಮ್ಮ ಪಕ್ಷದ ನಾಯಕರಿಗೆ ಶಿಕ್ಷೆ ಕೊಡಿಸಲು ಒತ್ತಾಯಪಡಿಸಲಿ.ಹಾಗೂ ತನ್ನ ಕ್ಷೇತ್ರದಲ್ಲೇ  ಕೋವಿಡ್ ಬಾದಿತರಾಗಿ ಲಾಕ್ ಡೌನ್ ನಿಂದ ಒಂದೊತ್ತಿನ ಊಟಕ್ಕೂ ಪರದಾಡುವಂತಹ ಅನೇಕ ಕುಟುಂಬಗಳಿವೆ,ಅವರಿಗೆ ಸಹಾಯ ಮಾಡುವ ಸಲುವಾಗಿ ಕಾರ್ಯ ನಿರ್ವಹಿಸಲಿ.ಅದು ಬಿಟ್ಟು ಇಂತಹ ಸಾಂಕ್ರಾಮಿಕದ ಸಮಯದಲ್ಲೂ  ತನ್ನ ಎಂದಿನ ಕೋಮುವಾದಿ ಚಾಳಿಯನ್ನು ಮುಂದುವರಿಸುವುದು ತಾನು ಸಂಸದೆ ಎಂಬ ಕನಿಷ್ಠ ಜ್ಞಾನ ದಿಂದ ಕೆಲಸ ನಿರ್ವಹಿಸುವುದು ಒಳಿತು. ತನ್ನ ಅವಿವೇಕಿತನದ ಹೇಳಿಕೆಯನ್ನು ಹಿಂಪಡೆದು ಕ್ರೈಸ್ತ ಸಮುದಾಯದ ಕ್ಷಮೆ ಕೇಳಬೇಕೆಂದು ಮುಜಾಹಿದ್ ಪಾಷಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Join Whatsapp