ಈಗ ‘ಹಿಂದೂ ವಿರೋಧಿ’ಯಾಗುವ ಸರದಿ ‘ಬಿಗ್ ಬಿ’ಯದ್ದು!I ಅಮಿತಾಬ್ ವಿರುದ್ಧ ಹಿಂದೂ ಭಾವನೆ ಕೆರಳಿಸಿದ್ದಕ್ಕೆ ಎಫ್.ಐ.ಆರ್

Prasthutha|

ಹೊಸದಿಲ್ಲಿ: ಶುಕ್ರವಾರದ ‘ಕರ್ಮವೀರ ವಿಶೇಷ’ ಸಂಚಿಕೆಯಲ್ಲಿ ಎತ್ತಿದ ಪ್ರಶ್ನೆಯೊಂದು ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್ ರ ‘ಕೌನ್ ಬನೇಗಾ ಕ್ರೋರ್ ಪತಿ 12” ದೂರದರ್ಶನ ಕಾರ್ಯಕ್ರಮವನ್ನು ಸಮಸ್ಯೆಯಲ್ಲಿ ಸಿಲುಕಿದೆ. ಹಿಂದೂಗಳ ಭಾವನೆಯನ್ನು ಘಾಸಿಗೊಳಿಸಿದ ಆರೋಪದಲ್ಲಿ ಬಿಗ್ ಬಿ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗಿದೆ.

- Advertisement -

ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ಬೆಝ್ವಾಡಾ ವಿಲ್ಸನ್ ಮತ್ತು ನಟ ಅನೂಪ್ ಸೋನಿ ಬಿಗ್ ಬಿ ಮುಂದೆ ಆಸೀನರಾಗಿದ್ದರು. ಪ್ರಶ್ನೆಯು ರೂ.6,40,000 ಬೆಲೆಬಾಳುವಂತದ್ದಾಗಿತ್ತು.

ಪ್ರಶ್ನೆ: 1927ರ ಡಿಸೆಂಬರ್ 25ರಂದು ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಅವರ ಅನುಯಾಯಿಗಳು ಯಾವ ಧರ್ಮಗ್ರಂಥದ ಪ್ರತಿಯನ್ನು ಸುಟ್ಟುಹಾಕಿದ್ದರು?

- Advertisement -

ಆಯ್ಕೆಗಳು: (ಎ) ವಿಷ್ಣು ಪುರಾಣ (ಬಿ) ಭಗವದೀತೆ (ಸಿ) ರಿಗ್ವೇದ (ಡಿ) ಮನುಸ್ಮೃತಿ

ಪ್ರಶ್ನೆಗೆ ಉತ್ತರ ‘ಮನುಸ್ಮೃತಿ’ ಎಂದಾಗಿತ್ತು. ಇದನ್ನು ಪ್ರಕಟಿಸಿದ ಬಳಿಕ ಅಮಿತಾಬ್ ಬಚ್ಚನ್ ಹಿಂದಿಯಲ್ಲಿ ಆ ಕುರಿತು ವಿವರಣೆಯನ್ನು ನೀಡುತ್ತಾ, “1927ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರಾಚೀನ ಹಿಂದೂ ಗ್ರಂಥ ಮನುಸ್ಮೃತಿಯನ್ನು ಖಂಡಿಸಿದ್ದರು ಮತ್ತು ಅದರ ಪ್ರತಿಗಳನ್ನು ಸುಟ್ಟುಹಾಕಿದ್ದರು” ಎಂದಿದ್ದರು.

ಇದರಿಂದ ಸಾಮಾಜಿಕ ಜಾಲತಾಣಗಳಲ್ಲಿರುವ ಹಿಂದುತ್ವ ಗುಂಪುಗಳು ಕೆರಳಿದ್ದು, ‘ ಕೆಬಿಸಿ 12 ಬಹಿಷ್ಕರಿಸಿ’ ಎಂದು ಹಲವರು ಟ್ವೀಟ್ ಮಾಡಿದ್ದರು.

ಚಿತ್ರ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಈ ಎಪಿಸೋಡ್ ನ ಕ್ಲಿಪ್ ವೊಂದನ್ನು ಪೋಸ್ಟ್ ಮಾಡಿ, “ಕೆಬಿಸಿ ಕಮ್ಯುನಿಸ್ಟರಿಂದ ಅಪಹರಣಗೊಂಡಿದೆ. ಅಮಾಯಕ ಮಕ್ಕಳೇ, ಹೇಗೆ ಸಂಸ್ಕೃತಿ ಯುದ್ಧಗಳು ಗೆಲ್ಲುತ್ತದೆಯೆಂದು ತಿಳಿಯಿರಿ. ಕೋಡಿಂಗ್ ಎಂದರೆ ಇದುವೇ” ಎಂಬುದಾಗಿ ಬರೆದಿದ್ದರು.

Join Whatsapp