ಝುಬೈರ್ ಹತ್ಯೆ ಪ್ರಕರಣ: ದುಷ್ಕರ್ಮಿಗಳು ಬಳಸಿದ ಕಾರಿನ ಮಾಲೀಕ ಕೃಪೇಶ್, ಬಳಸುತ್ತಿದ್ದಾತ ಅಲಿಯಾರ್

Prasthutha|

ಪಾಲಕ್ಕಾಡ್: ಎಲಪ್ಪುಳ್ಳಿಯಲ್ಲಿ ಎಸ್ ಡಿಪಿಐ ಕಾರ್ಯಕರ್ತ ಝುಬೈರ್ ಅವರನ್ನು ಹತ್ಯೆಗೈದ ನಂತರ ದುಷ್ಕರ್ಮಿಗಳು ರಕ್ಷಣೆಗೆ ಬಳಸಿದ ಕಾರ್  ಉಪಯೋಗಿಸಿರುವುದು ಅಲಿಯಾರ್ ಎಂಬ ವ್ಯಕ್ತಿಯಾಗಿದ್ದಾರೆ ಎಂದು ಕಾರಿನ ಮಾಲೀಕ ಕೃಪೇಶ್ ಹೇಳಿದ್ದಾರೆ.

- Advertisement -

ಕಾಂಜಿಕೋಡ್ ಎಂಬಲ್ಲಿ ಕಾರು ಪತ್ತೆಯಾದ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ  ಮಾತನಾಡಿದ ಕಾರಿನ ಮಾಲೀಕ ಕೃಪೇಶ್, ನಾನು ಕಾರಿನ ಆರ್ ಸಿ ಮಾಲೀಕನಾಗಿದ್ದೇನೆ. ಕಾರನ್ನು ನನ್ನ ಹೆಸರಿನಲ್ಲಿ ತೆಗೆದುಕೊಳ್ಳಲಾಗಿದ್ದರೂ  ಅದನ್ನು ಬಳಸುತ್ತಿರುವವರು ಅಲಿಯಾರ್. ಅವರು ಎರಡು ಮೂರು ವರ್ಷಗಳಿಂದ ಕಾರನ್ನು ಬಳಸುತ್ತಿದ್ದಾರೆ. ಅಲಿಯಾರ್ ನನ್ನ ನೆರೆಮನೆಯ  ವ್ಯಕ್ತಿಯಾಗಿದ್ದು, ನಾನು ಅವರೊಂದಿಗೆ ಎರಡು ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ” ಎಂದು ಹೇಳಿದ್ದಾರೆ

ಝುಬೈರ್ ನನ್ನು ಕೊಲೆ ಮಾಡಿದ ನಂತರ ಆರೋಪಿಗಳು ಬಳಸಿದ್ದಾರೆ ಎಂದು ನಂಬಲಾದ ಕಾರು ಕಾಂಜಿಕೋಡ್ ಎಂಬಲ್ಲಿ ಪತ್ತೆಯಾಗಿದೆ. ಗ್ಯಾಂಗ್ ಎರಡು ಕಾರುಗಳಲ್ಲಿ ಬಂದು ಕೊಲೆಯ ನಂತರ ಒಂದು ಕಾರನ್ನು ಬಿಟ್ಟುಹೋಗಿದೆ. ಹತ್ಯೆ ನಡೆದ ಸ್ಥಳದಲ್ಲಿದ್ದ ಕಾರು ಕೆಲವು ತಿಂಗಳ ಹಿಂದೆ ಕೊಲೆಯಾದ ಆರ್ ಎಸ್ ಎಸ್ ಕಾರ್ಯಕರ್ತ ಸಂಜಿತ್ ಗೆ ಸೇರಿದ ಕಾರು ಎಂದು ಪೊಲೀಸರು ಪತ್ತೆ ಹಚ್ಚಿದ್ದರು. ತಪ್ಪಿಸಿಕೊಳ್ಳಲು ಬಳಸಲಾದ ಎರಡನೇ ಕಾರು ಕೃಪೇಶ್ ಅವರದ್ದೆಂದು  ತಿಳಿದು ಬಂದಿದೆ.



Join Whatsapp