ಗೋಹತ್ಯೆ ಆರೋಪದಲ್ಲಿ ಯುವಕನಿಗೆ ಚಿತ್ರಹಿಂಸೆ: ಐವರು ಪೊಲೀಸರು ಸೇರಿದಂತೆ ಏಳು ಮಂದಿಯ ವಿರುದ್ಧ ಪ್ರಕರಣ ದಾಖಲು

Prasthutha|

ಉತ್ತರ ಪ್ರದೇಶ: ಗೋಹತ್ಯೆ ಹತ್ಯೆ ನಡೆಸಿದ ಆರೋಪದಲ್ಲಿ ಶಂಕಿತನಾಗಿದ್ದ 22 ವರ್ಷದ ಯುವಕನೋರ್ವನಿಗೆ ಚಿತ್ರಹಿಂಸೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಐವರು ಪೊಲೀಸರು ಸೇರಿದಂತೆ ಕನಿಷ್ಠ ಏಳು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.ಯುವಕನಿಗೆ ವಿದ್ಯುತ್ ಶಾಕ್ ನೀಡಿ, ಗುದನಾಳದೊಳಗೆ ಲಾಠಿಯನ್ನೂ ತುರುಕ್ಕಿದ್ದಾಗಿ ಸಂತ್ರಸ್ತನ ತಾಯಿ ದೂರನ್ನು ದಾಖಲಿಸಿದ್ದರು. ಇದೀಗ ದೂರಿನ ಅನ್ವಯ ಏಳು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.

- Advertisement -

ಪೊಲೀಸರು ವೈದ್ಯಕೀಯ-ಕಾನೂನು ವರದಿಯನ್ನು ಪರಿಗಣನೆಗೆ ತೆಗೆದುಕೊಂಡ ಬಳಿಕ ಯುವಕನಿಗೆ ಚಿತ್ರಹಿಂಸೆ ನೀಡಿರುವುದು ತಿಳಿದುಬಂದಿದ್ದು ನಂತರ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಕುರಿತು ತನಿಖೆ ನಡೆಸುವಂತೆ ಹಿರಿಯ ಪೊಲೀಸ್ ಅಧೀಕ್ಷಕ ಒಪಿ ಸಿಂಗ್ ಅವರು ದತ್ತಗಂಜ್ ವೃತ್ತದ ಅಧಿಕಾರಿ ಪ್ರೇಮ್ ಕುಮಾರ್ ಥಾಪಾ ಅವರಿಗೆ ಸೂಚಿಸಿದ್ದಾರೆ.

ಚಿತ್ರಹಿಂಸೆ ಗೀಡಾದ ಯುವಕನ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

Join Whatsapp