ಜೈಲಿಗೆ ಹೋಗಲು ಪ್ರಧಾನಿ ಮೋದಿಯನ್ನು ಕೊಲ್ಲುವ ಬೆದರಿಕೆ ಹಾಕಿದ ಯುವಕ!

Prasthutha|

ಹೊಸದಿಲ್ಲಿ: ಜೈಲಿಗೆ ಹೋಗಲು ಬಯಸಿದ ಯುವಕನೋರ್ವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಲ್ಲುವುದಾಗಿ ಬೆದರಿಸಿ ದೆಹಲಿಯ ಪೊಲೀಸ್ ನಿಯಂತ್ರಣ ಕೊಠಡಿ-ಪಿಸಿಆರ್ ಗೆ ಕರೆ ಮಾಡಿ ಪೊಲೀಸರ ಅತಿಥಿಯಾಗಿರುವ ಘಟನೆ ನಡೆದಿದೆ.

- Advertisement -

 ಸಲ್ಮಾನ್ ಅಲಿಯಾಸ್ ಅರ್ಮಾನ್ ಬಂಧಿತ ಆರೋಪಿ. ಆದರೆ ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ಬೆದರಿಕೆ ಹಾಕಲು ಕಾರಣ ಕೇಳಿದಾಗ ವಿಚಿತ್ರ ಕಾರಣ ನೀಡಿದ್ದಾನೆ.

ನನಗೆ ಜೈಲಿಗೆ ಹೋಗಬೇಕು, ಅದಕ್ಕಾಗಿ ಈ ಕೊಲೆ ಬೆದರಿಕೆ ಹಾಕಿದ್ದೇನೆ ಎಂದು ಆತ ಹೇಳಿದ್ದಾನೆ.

- Advertisement -

ಬಂಧಿತ ಮಾದಕ ವ್ಯಸನಿಯಾಗಿದ್ದು, ಈ ಹಿಂದೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಾಲಾಪರಾಧಿಗಳ ಕೇಂದ್ರದಲ್ಲಿ ಇದ್ದ ಎನ್ನಲಾಗಿದೆ.

ಆರೋಪಿ ಗುರುವಾರ ಮಧ್ಯರಾತ್ರಿ 112  ಪಿಸಿಆರ್ ಗೆ ಕರೆ ಮಾಡಿ ಪ್ರಧಾನಿ ಮೋದಿಯವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕರೆ ಸ್ವೀಕರಿಸಿದ ಸಂಖ್ಯೆಯನ್ನು ತಕ್ಷಣವೇ ಪತ್ತೆ ಹಚ್ಚಿದ ಪೊಲೀಸರು ಆತನನ್ನು ಖಜುರಿ ಖಾಸ್ ಎಂಬಲ್ಲಿ ಪತ್ತೆ ಹಚ್ಚಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಕರೆ ಮಾಡಿದ ಸಮಯದಲ್ಲಿ ಸಲ್ಮಾನ್ ಡ್ರಗ್ಸ್ ಸೇವಿಸಿದ್ದ. ರಾತ್ರಿ 10 ಗಂಟೆ ಸುಮಾರಿಗೆ ಆತನಿಗೆ ತಂದೆ ಬೈದಿದ್ದಾರೆ ಎಂದು ತಿಳಿದುಬಂದಿದೆ.

  ಜೈಲಿಗೆ ಹೋಗಲು ‘ಬಯಸಿದ್ದರಿಂದ’ ಕರೆ ಮಾಡಿದ್ದಾಗಿ ವಿಚಾರಣೆಯ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ.  ಜೈಲಿಗೆ ಏಕೆ ಹೋಗಬೇಕೆಂದು ಕೇಳಿದಾಗ, ನಾನು ಅಲ್ಲಿರಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾನೆ. ತಾನು ಮಾದಕ ವ್ಯಸನಿಯಾಗಿದ್ದು, ಗುರುವಾರ ಸಂಜೆ 7 ಗಂಟೆ ಸುಮಾರಿಗೆ ಸ್ವಲ್ಪ ಸ್ಮ್ಯಾಕ್ ತೆಗೆದುಕೊಂಡಿದ್ದೇನೆ ಎಂದು ಸಲ್ಮಾನ್ ಪೊಲೀಸರಿಗೆ ತಿಳಿಸಿದ್ದಾನೆ.

Join Whatsapp