ಬೈಕ್‌ ಅಡ್ಡಗಟ್ಟಿ ಯುವಕನ ಹತ್ಯೆ; ಆರೋಪಿಗಳು ಪರಾರಿ

Prasthutha|

ಮೈಸೂರು: ಬೈಕ್‌ ನಲ್ಲಿ ತೆರಳುತ್ತಿದ್ದ ವೇಳೆ ಅಡ್ಡಗಟ್ಟಿದ ನಾಲ್ವರ ತಂಡ ಯುವಕನೊಬ್ಬನಿಗೆ ಚೂರಿ ಇರಿದು ಹತ್ಯೆಗೈದಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಮೆಲ್ಲಹಳ್ಳಿಯಲ್ಲಿ ನಡೆದಿದೆ.

- Advertisement -


ಮನೋಜ್ (24) ಹತ್ಯೆಗೀಡಾದ ಯುವಕ. ಮನೋಜ್ ಮನೆಗೆ ಹೋಗುತ್ತಿದ್ದ ವೇಳೆ ಬೈಕ್ ಅಡ್ಡಗಟ್ಟಿ ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ.


ಪರಿಚಯದವರೇ ಆದ ರಘು, ಸಚಿನ್, ಕಿರಣ್, ಶಂಕರ್ ಎಂಬ ನಾಲ್ವರು ಸೇರಿ ಮನೋಜ್ ನನ್ನು ಹತ್ಯೆಗೈದಿದ್ದಾರೆ. ಈ ಮಧ್ಯೆ ಮನೋಜ್ ಮತ್ತು ಆರೋಪಿಗಳ ನಡುವೆ ಸಣ್ಣ, ಸಣ್ಣ ವಿಚಾರಕ್ಕೆ ಗಲಾಟೆಗಳು ನಡೆಯುತ್ತಿತ್ತು. ಅದರ ಮುಂದುವರಿದ ಭಾಗವಾಗಿ ಮನೋಜ್ ನನ್ನು ಕೊಲೆ ಮಾಡಲಾಗಿದೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

- Advertisement -


ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp