ಬೆಂಗಳೂರು: ತಾಯಿಗೆ ಊಟ ತರಲು ಹೋದ ಮಗ ರಸ್ತೆ ಗುಂಡಿಗೆ ಬಿದ್ದು ಮೃತ್ಯು!

Prasthutha|

ಬೆಂಗಳೂರು: ಜಲಮಂಡಳಿ ಅಗೆದಿದ್ದ ರಸ್ತೆಗುಂಡಿಗೆ ಬಿದ್ದು ಬೈಕ್ ಸವಾರ ಸಾವಿಗೀಡಾಗಿದ್ದಾನೆ. ನಗರದ ಎಂಎಸ್ ಪಾಳ್ಯದ ಮುನೇಶ್ವರ ಲೇಔಟ್ ರಸ್ತೆಯಲ್ಲಿ ಜಲಮಂಡಳಿ ಅಗೆದಿದ್ದ ರಸ್ತೆಗುಂಡಿಗೆ ಬಿದ್ದು ಬೈಕ್ ಸವಾರ ಬಲಿಯಾಗಿದ್ದು, ಮೃತ ಯುವಕನನ್ನು ಅಶ್ವಿನ್(27) ಎಂದು ಗುರುತಿಸಲಾಗಿದೆ.

- Advertisement -

ತಾಯಿಗೆ ಊಟ ತರಲು ಹೋಟೆಲ್ ಗೆ ಹೋಗಿದ್ದ ಅಶ್ವಿನ್ ಮನೆಗೆ ಹಿಂದಿರುವ ವೇಳೆ ರಸ್ತೆ ಗುಂಡಿಗೆ ಬಿದ್ದಿದ್ದಾನೆ.ಘಟನಾ ಸ್ಥಳದಲ್ಲಿ ಬೀದಿದೀಪ ಕಾರ್ಯನಿರ್ವಹಿಸಿದ ಅಪಘಾತ ಸಂಭವಿಸಿದೆ ಎನ್ನಲಾಗಿದ್ದು, ಗುಂಡಿಗೆ ಬಿದ್ದ ಅಶ್ವಿನ್ ನನ್ನು ಆಸ್ಪತ್ರೆಗೆ ಸಾಗಿಸಲು ಆಂಬುಲೆನ್ಸ್ ಗೆ ಕರೆ ಮಾಡಲಾಗಿತ್ತಾದರೂ ಆಂಬುಲೆನ್ಸ್ ಬಂದಿರಲಿಲ್ಲ. ಈ ವೇಳೆ ಸ್ಥಳೀಯರು ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸಿದರೂ ಅಶ್ವಿನ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

ಮೃತ ಆಶ್ವಿನ್ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು. ತಾಯಿಗೆ ಒಬ್ಬನೇ ಮಗ ಎಂದು ತಿಳಿದುಬಂದಿದೆ. ಅಪಘಾತ ಸಂಭವಿಸಿ ಬೈಕ್ ಸವಾರ ಅಶ್ವಿನ್ ಮೃತಪಟ್ಟ ಸ್ಥಳದಲ್ಲಿ ಆತನ ಸ್ನೇಹಿತರು ಜಮಾಯಿಸಿದ್ದು, ಘಟನೆಗೆ ಬಿಬಿಎಂಪಿ, ಜಲಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂದು ದೂರಿದ್ದಾರೆ.

Join Whatsapp